ರೈತನನ್ನೇ ಮದುವೆ ಮಾಡಿಕೊಳ್ಳುತ್ತೇನೆ ಎನ್ನುತ್ತಿದ್ದ ಸ್ಯಾಂಡಲ್ ವುಡ್ ಕ್ಯೂಟಿ ಎಂಗೇಜ್ಮೆಂಟ್ ಆಗಿದ್ದಾರಂತೆ!! ನಟಿ ಅಧಿತಿ ಪ್ರಭುದೇವ ಕೈಹಿಡಿಯಲಿರುವ ಕೃಷಿಕ ಯಾರುಗೊತ್ತಾ!??

ರೈತನನ್ನೇ ಮದುವೆಯಾಗುತ್ತೇನೆ ಎಂದು ಹೇಳುತ್ತಿದ್ದ ಕನ್ನಡದ ನಟಿ ಅಧಿತಿ ಪ್ರಭುದೇವ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನ ಕ್ಯೂಟಿ ಎಂದೇ ಕರೆಯಲ್ಪಡುವ ಅಧಿತಿಯ ಕೈಹಿಡಿಯುವ ಹುಡುಗ ಕೃಷಿಕನಾಗಿದ್ದು, ಸದ್ಯ ಚಂದನವನದಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂಬ ಗಾಳಿ ಸುದ್ದಿ ಹಬ್ಬಿದೆ.

ಕಿರುತೆರೆಯ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ದಾವಣಗೆರೆ ಬೆಡಗಿ ಅಧಿತಿ ಈಗ ಸಿನಿಮಾ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಎಲ್ಲರ ಮನೆಮಾತಾಗಿದ್ದಾರೆ.

ಈ ಕ್ಯೂಟಿಯ ಎಂಗೇಜ್ಮೆಂಟ್ ಗಾಸಿಪ್ ಹಬ್ಬಿದ್ದು ಎಲ್ಲೆಡೆ ಹಬ್ಬಿದ್ದು, ಹಲವು ವರ್ಷಗಳಿಂದ ತಾನು ಪ್ರೀತಿಸುತ್ತಿದ್ದ ಕಾಫಿ ತೋಟದ ಮಾಲೀಕ ಮೂಲತಃ ಚಿಕ್ಕಮಗಳೂರಿನ ಯಶಸ್ ಎನ್ನುವ ಹುಡುಗನೊಂದಿಗೆ ಕೆಲ ದಿನಗಳ ಹಿಂದೆ ಎಂಗೇಜ್ಮೆಂಟ್ ಆಗಿದೆ ಎನ್ನಲಾಗುತ್ತಿದೆ.

Leave A Reply

Your email address will not be published.