ಬಿಜೆಪಿ ರಾಜ್ಯ ನಾಯಕನ ಹತ್ಯೆ | ಎಸ್‌ಡಿಪಿಐ ಮುಖಂಡನ ಹತ್ಯೆ ಬೆನ್ನಲ್ಲೆ ಬಿಜೆಪಿ ನಾಯಕನ ಕೊಲೆ

ಕೇರಳ : ಕೇರಳದಲ್ಲಿ ಎಸ್‌ಡಿಪಿಐ ನಾಯಕನ ಹತ್ಯೆ ಬೆನ್ನಲ್ಲೆ
ಬಿಜೆಪಿ ಕೇರಳ ರಾಜ್ಯ ಸಮಿತಿ ಸದಸ್ಯನ ಮನೆಗೆ ನುಗ್ಗಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ರಂಜಿತ್ ಶ್ರೀನಿವಾಸನ್ ಎಂಬ ಬಿಜೆಪಿ ನಾಯಕನೇ ಹತ್ಯೆ ಯಾದವರು. ಇವರು ಬಿಜೆಪಿಯ ರಾಜ್ಯ ಒಬಿಸಿ ಮೋರ್ಚಾ ಪದಾಧಿಕಾರಿಯಾಗಿದ್ದರು.

ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ ಶಾನ್ ಅವರ ಹತ್ಯೆ ನಡೆದ ಬೆನ್ನಲ್ಲೇ ಘಟನೆ ನಡೆದಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ತನಿಖೆ ನಡೆಯುತ್ತಿದೆ.

Leave A Reply

Your email address will not be published.