ಮಂಗಳೂರು: ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ, ನಾಲ್ವರ ವಿರುದ್ಧ ದೂರು ದಾಖಲು

ಕಾಲೇಜು ವಿದ್ಯಾರ್ಥಿನಿಗೆ ನಾಲ್ವರು ಯುವಕರು ಕಿರುಕುಳ ಘಟನೆ ವಾಮಂಜೂರು ಸಮೀಪದ ತಿರುವೈಲಿನಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ನಾಲ್ಕು ಮಂದಿಯ ವಿರುದ್ಧ ಪಾಂಡೇಶ್ವರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಮೂಡುಶೆಡ್ಡೆ ವಾಮಂಜೂರು ನಿವಾಸಿ ಚರಣ್ ಹಾಗೂ ಆತನ ಮೂವರು ಸ್ನೇಹಿತರು ಡಿ.2 ರಿಂದ 9 ರವರೆಗೆ ನಿರಂತರ ಕಿರುಕುಳ ನೀಡಿದ್ದರು ಎಂದು ದೂರಲಾಗಿದೆ.

ವಿದ್ಯಾರ್ಥಿನಿಯ ಮೊಬೈಲ್ ಕಿತ್ತುಕೊಂಡು, ಅದರಲ್ಲಿರೋ ಮೆಮೊರಿ ಕಾರ್ಡ್ ತೆಗೆದಿದ್ದಲ್ಲದೇ, ಆಗಾಗ ಮೆಸೇಜ್ ಹಾಗೂ ಕರೆಮಾಡಿ ಕಿರುಕುಳ ನೀಡುತ್ತಿದ್ದರು. ಅಲ್ಲದೆ, ಈ ಬಗ್ಗೆ ಯಾರಿಗೂ ತಿಳಿಸಬಾರದು ಎಂದು ಬೆದರಿಸಿದ್ದಾರೆ ಎಂದು ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾಳೆ.

ಆಕೆ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.