ಗುಂಡ್ಯ : ಚಾಲಕನ ನಿಯಂತ್ರಣ ತಪ್ಪಿ ಜೀತೋ ಗಾಡಿ ಪಲ್ಟಿ | ನಾಲ್ವರು ಗಂಭೀರ

ಕಡಬ : ಜೀತೋ ಗಾಡಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ, ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ಗುಂಡ್ಯ ಸಮೀಪದ ಬರ್ಚಿನಹಳ್ಳ ಎಂಬಲ್ಲಿ ನಡೆದಿದೆ.

ಗಾಯಾಳುಗಳನ್ನು ನಿಡ್ಲೆ ಗ್ರಾಮ ಸಹಾಯಕ ಯತೀಂದ್ರ ಹಾಗೂ ಕೊಕ್ಕಡ ನಾಡ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆನಂದ, ಬರೆಂಗಾಯದ ಗುರು, ಪ್ರಜ್ವಲ್, ಆಪೆ ಚಾಲಕ ಕಳೆಂಜದ ಶಾಲೆತ್ತಡ್ಕ ನಿವಾಸಿ ಎಂದು ಗುರುತಿಸಲಾಗಿದೆ.

ಬರೆಂಗಾಯದ ಗುರು ಎಂಬುವವರ ತಲೆಗೆ ಗಂಭೀರ ಗಾಯವಾಗಿದ್ದು ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ, ಆನಂದ ಹಾಗೂ ಉಳಿದವರನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರು ಶಿರಾಡಿ ಗಡಿಯ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಬರೆಂಗಾಯಕ್ಕೆ ವಾಪಸ್ ಆಗುತ್ತಿರುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

Leave A Reply

Your email address will not be published.