ಧರ್ಮಸ್ಥಳ | ಹತ್ಯಡ್ಕ ಸಮೀಪ ನಡೆದಿದ್ದ ಸಾಕೆಮ್ಮ ಹತ್ಯೆಯ ಆರೋಪಿಗಳನ್ನು ಬಂಧಿಸುವಂತೆ ಹಿಂ.ಜಾ.ವೇ ಕಡೆಯಿಂದ ಮನವಿ

ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಸಮೀಪ ಸೆಪ್ಟೆಂಬರ್ 7ರಂದು ಗುಂಡು ಹಾರಿಸಿ ಸಾಕು ಎಮ್ಮೆಯನ್ನು ಹತ್ಯೆ ಮಾಡಿದ ಘಟನೆಯನ್ನು ಹಿಂ.ಜಾ.ವೇ. ಕೊಕ್ಕಡ ವಲಯವೂ ತೀವ್ರವಾಗಿ ಖಂಡಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕೆಂದು ಕೊಕ್ಕಡ ವಲಯ ಹಿಂದು ಜಾಗರಣ ವೇದಿಕೆ ವತಿಯಿಂದ ಧರ್ಮಸ್ಥಳ ಪೋಲಿಸ್ ಠಾಣೆಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಲಯಾಧ್ಯಕ್ಷ ರೂಪೇಶ್ ಶಿಶಿಲ, ಪ್ರಧಾನ ಕಾರ್ಯದರ್ಶಿ ಸಚಿನ್ ಕೊಕ್ಕಡ, ಶಿಶಿಲ ಘಟಕದ ಕಾರ್ಯದರ್ಶಿ ಯತೀಶ್ ಪೇರಿಕೆ, ಕೊಕ್ಕಡ ಘಟಕದ ಕಾರ್ಯದರ್ಶಿ ವಿನಯ್, ಸಂಪರ್ಕ ಪ್ರಮಖ್ ಉಮೇಶ್ ಕೊಕ್ಕಡ, ಶೋಭಿತ್ ಶಿಶಿಲ ಉಪಸ್ಥಿತರಿದ್ದರು.

Leave A Reply

Your email address will not be published.