ಚಿನ್ನದಂಗಡಿ ದರೋಡೆ ಮಾಡಿದ ದರೋಡೆಕೋರರಿಂದ ಗುಂಡು ಹಾರಾಟ | ಅಮಾಯಕ ಯುವಕ ಬಲಿ
![](https://hosakannada.com/wp-content/uploads/2021/08/IMG-20210823-WA0033.jpg)
ಚಿನ್ನಾಭರಣ ಕಳವು ಮಾಡಲು ಚಿನ್ನದಂಗಡಿಗೆ ಬಂದ ದರೋಡೆಕೋರರು ಹಾರಿಸಿದ ಗುಂಡಿಗೆ ಅಮಾಯಕ ಬಲಿಯಾಗಿರುವ ಘಟನೆ ಮೈಸೂರಿನಲ್ಲಿ ಸೋಮವಾರ ನಡೆದಿದೆ.
![](https://hosakannada.com/wp-content/uploads/2024/07/First.jpeg)
ಘಟನೆಯಲ್ಲಿ ಮೈಸೂರಿನ ದಡದಹಳ್ಳಿ ಗ್ರಾಮದ ಚಂದ್ರು (23) ಎಂಬ ಅಮಾಯಕ ಯುವಕ ದರೋಡೆಕೋರರ ಗುಂಡೇಟಿಗೆ ಬಲಿಯಾದ ದುರ್ದೈವಿ ಯುವಕ.
![](https://hosakannada.com/wp-content/uploads/2024/07/Middle.jpeg)
ಮೈಸೂರಿನ ವಿದ್ಯಾರಣ್ಯಪುರಂ ಚಿನ್ನಾಭರಣ ಮಳಿಗೆಯೊಂದಕ್ಕೆ ಸೋಮವಾರ ಸಾಯಂಕಾಲ ಚಿನ್ನ ಖರೀದಿಸುವಂತೆ ಬಂದ ಖದೀಮರು, ಏಕಾಏಕಿ ಅಂಗಡಿ ಮಾಲೀಕನಿಗೆ ಪಿಸ್ತೂಲ್ ತೋರಿಸಿ ಬೆದರಿಸಿ ಚಿನ್ನಾಭರಣ ದೋಚಲು ಯತ್ನಿಸಿದ್ದಾರೆ.
ಈ ವೇಳೆ ಪ್ರತಿರೋಧ ತೋರಲು ಅಂಗಡಿ ಮಾಲೀಕ ಮುಂದಾದಾಗ ಚಿನ್ನಾಭರಣ ಅಂಗಡಿಯಿಂದ ಹೊರಬಂದು ದರೋಡೆಕೋರರು ಹಾರಿಸಿದ್ದ ಗುಂಡು ರಸ್ತೆಯಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಗುಂಡು ತಗುಲಿದ್ದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.