ಬೆಳ್ತಂಗಡಿ ಶಾಸಕರ ನೆರವಿಗೆ ಸ್ಪಂದಿಸಿದ ಸರಕಾರ |ತಾಲೂಕು ಆಸ್ಪತ್ರೆಗೆ 15 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳ ಹಸ್ತಾಂತರ

ಶಾಸಕರಾದ ಹರೀಶ್ ಪೂಂಜರವರು ಸಿಎಸ್ಆರ್ ಯೋಜನೆಯಡಿಯಲ್ಲಿ ನೀಡುವ 15 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಬೆಳ್ತಂಗಡಿ ತಾಲೂಕಿನಲ್ಲಿರುವ ಕೋವಿಡ್ ಸಂತ್ರಸ್ತರ ಚಿಕಿತ್ಸೆಗೆ ನೆರವಾಗಲು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಹಸ್ತಾಂತರಿಸಿದರು.

ಬೆಳ್ತಂಗಡಿ ತಾಲೂಕಿನಲ್ಲಿರುವ ಕೋವಿಡ್ ಸಂತ್ರಸ್ತರಿಗೆ ಚಿಕಿತ್ಸೆಗಾಗಿ ಸಿಎಸ್‌ಆರ್ ಯೋಜನೆಯಡಿ 20 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಒದಗಿಸಿಕೊಡುವಂತೆ ಶಾಸಕ ಹರೀಶ್ ಪೂಂಜ ರವರು ಈ ಹಿಂದೆಯೇ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ರವರಿಗೆ ಮನವಿ ನೀಡಿದ್ದರು.

ಶಾಸಕರ ಮನವಿಗೆ ಸ್ಪಂದಿಸಿ, ಸರಕಾರ ಸಿಎಸ್‌ಆರ್ ಯೋಜನೆಯಡಿ ತಾಲೂಕಿಗೆ 15 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಒದಗಿಸಿದೆ. ಶಾಸಕ ಹರೀಶ್ ಪೂಂಜ, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ| ವಿದ್ಯಾವತಿಯವರ ಮೂಲಕ ಆಸ್ಪತ್ರೆಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಡಾ| ಯೋಗೀಶ್, ಆಸ್ಪತ್ರೆಯ ನರ್ಸ್ ಜಾಯ್ ಡಿ’ಸೋಜ, ಸಿಬ್ಬಂದಿ ಚಂದ್ರಶೇಖರ್, ಆರೋಗ್ಯ ರಕ್ಷಾ ಸಮಿತಿಯ ತುಕಾರಾಮ, ಯಶೋಧಾ ಲಾಯಿಲ, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

Leave A Reply

Your email address will not be published.