ಬೆಂಗಳೂರು : ಕೊರೊನದಿಂದ ಪೋಷಕರನ್ನು ಕಳೆದುಕೊಂಡ ಬಾಲಕಿಗೆ ಆರ್ಥಿಕ ಸಹಾಯ

ಮಹಾಮಾರಿ ಕೊರೋನಾದ ಅಟ್ಟಹಾಸದಿಂದ ಆಸ್ತಿ ಪಾಸ್ತಿ, ಮನೆ ಕಳೆದುಕೊಂಡಿದ್ದು, ಹಲವು ಮಕ್ಕಳು ಪೋಷಕರನ್ನೇ ಕಳೆದುಕೊಂಡು ತಬ್ಬಲಿಗಳಾಗಿದ್ದಾರೆ.

ಇದೀಗ ಕೊರೊನದಿಂದ ಪೋಷಕರನ್ನು ಕಳೆದುಕೊಂಡ ಬಾಲಕಿಯೊಬ್ಬಳನ್ನು ದತ್ತು ಪಡೆಯಲು ಶಾಸಕ ರೇಣುಕಾಚಾರ್ಯರವರು ಮುಂದಾಗಿದ್ದಾರೆ.

ತಮ್ಮ ಪತ್ನಿಯ ಜೊತೆಗೆ ಬಾಲಕಿಯ ಮನೆಗೆ ತೆರಳಿದ ಶಾಸಕ ರೇಣುಕಾಚಾರ್ಯ ಕೋವಿಡ್ ಆಹಾರ ಕೇಂದ್ರಗಳಲ್ಲಿ ಆಹಾರ ತಯಾರಿಸಿಕೊಟ್ಟು, ಯೋಗ ಮಾಡಿ, ಆರ್ಥಿಕ ಸಹಾಯ ಮಾಡುವುದರೊಂದಿಗೆ ಆಕೆಯ ಸಂಬಂಧಿಕರು ಒಪ್ಪುವುದಾದರೆ ದತ್ತು ಪಡೆಯುವುದಾಗಿ ತಿಳಿಸಿದ್ದು, ಸಚಿವರ ಇಂತಹ ಒಳ್ಳೆಯ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Leave A Reply

Your email address will not be published.