ಶೀಘ್ರದಲ್ಲೇ ವಿಸ್ತರಣೆಯಾಗಲಿದೆ ಸಚಿವ ಸಂಪುಟ |ರಾಜ್ಯದ ನಾಯಕರಲ್ಲಿ ಯಾರಿಗೆ ದಕ್ಕಲಿದೆ ಭಾಗ್ಯ..ಯಾರ ಪಾಲಾಗಲಿದೆ ರೈಲ್ವೆ ಖಾತೆ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಶ್ರೀಘ್ರದಲ್ಲೆ ವಿಸ್ತರಣೆಯಾಗುವ ಸಾಧ್ಯತೆ ಇದ್ದು ರಾಜ್ಯಕ್ಕೆ ಇನ್ನೆರಡು ಮಂತ್ರಿಗಿರಿ ಒಲಿದು ಬರುವ ನಿರೀಕ್ಷೆಯಿದೆ.

ಸದ್ಯ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಹಣಕಾಸು ಖಾತೆ ನಿರ್ವಹಿಸುತ್ತಿದ್ದಾರೆ. ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿ ಡಿವಿ ಸದಾನಂದ ಗೌಡ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೋದಿ ಕ್ಯಾಬಿನೆಟ್ ನಲ್ಲಿದ್ದ ಇನ್ನೊಬ್ಬ ಸಚಿವ ಸುರೇಶ್ ಅಂಗಡಿ ಕಳೆದ ವರ್ಷ ನಿಧನ ಹೊಂದಿದ್ದರು. ಆ ಬಳಿಕ ಆ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಿರಲಿಲ್ಲ.

ಆದ್ದರಿಂದ ಈ ಬಾರಿಯ ವಿಸ್ತರಣೆ ಸಂದರ್ಭದಲ್ಲಿ ರಾಜ್ಯಕ್ಕೆ ಮತ್ತೆ ಎರಡು ಸಚಿವ ಸ್ಥಾನ ಒಲಿದು ಬರುವ ಸಂಭವವಿದೆ. ಇನ್ನು ಕರ್ನಾಟಕದ 28 ಜನ ಸಂಸದರಲ್ಲಿ 25 ಜನ ಬಿಜೆಪಿಯಿಂದಲೇ ಆಯ್ಕೆಯಾಗಿದ್ದಾರೆ.

ಈ ನಡುವೆ ಲಿಂಗಾಯತ ಸಮುದಾಯದವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದ್ದು, ಇದು ನಿಜವಾದರೆ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ಮತ್ತು ಶಿವಕುಮಾರ್ ಉದಾಸಿ ಕೇಂದ್ರದಲ್ಲಿ ಮಂತ್ರಿಗಿರಿ ಅಲಂಕರಿಸಲಿದ್ದಾರೆ.

Leave A Reply

Your email address will not be published.