ಆಲಂಕಾರು | ಅಂಗಳದಲ್ಲಿದ್ದ ಅಡಿಕೆಯ ಗೋಣಿ ಕದ್ದೊಯ್ದ ಕಳ್ಳ

ಸುಲಿದು ಮಾರಾಟ ಮಾಡಲು ಅಂಗಳದಲ್ಲಿ ಇಟ್ಟಿದ್ದ ಅಡಿಕೆ ಚೀಲವೊಂದನ್ನು ಬೈಕ್ ನಲ್ಲಿ ಬಂದ ವ್ಯಕ್ತಿಯೊಬ್ಬ ಕದ್ದೊಯ್ದ ಘಟನೆ ಆಲಂಕಾರು ಸಮೀಪದ ಹಳೆನೇರೆಂಕಿ ಗ್ರಾಮದಲ್ಲಿ ನಡೆದಿದೆ.

ಕಡಬ ತಾಲೂಕು ಹಳೆ ನೇರಂಕಿ ಗ್ರಾಮದ ಅಲೆಪ್ಪಾಡಿಯ ಸುಕೇಶ ಎಂಬವರ ಮನೆಯಿಂದ ಅಡಿಕೆ ಚೀಲವನ್ನು ಪರಮೇಶ್ವರ ಎಂಬ ಹೆಸರಿನ ವ್ಯಕ್ತಿ ಬೈಕ್ ನಲ್ಲಿ ಕೊಂಡು ಹೋಗಿರುವುದಾಗಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.

ಅಡಿಕೆ ಸುಲಿದು ಮಾರಾಟ ಮಾಡಲು ಪ್ಲಾಸ್ಟಿಕ್ ಪಾಲಿಥೀನ್‌ ಚೀಲದಲ್ಲಿ ತುಂಬಿಸಿಟ್ಟಿದ್ದ ಎರಡು ಗೋಣಿ ಚೀಲ ಅಡಿಕೆಯನ್ನು ಮನೆಯ ಅಂಗಳದಲ್ಲಿ ಇಟ್ಟಿದ್ದರು. ಈ ವೇಳೆ ಮನೆಯ ಹಸುವೊಂದನ್ನು ಮೇಯಲು ಕಟ್ಟಿ ಹಾಕಿ ಬರಲು ಹೋದ ಸಂದರ್ಭ ಆರೋಪಿತ ವ್ಯಕ್ತಿ ಒಂದು ಪ್ಲಾಸ್ಟಿಕ್ ಚೀಲ ಅಡಿಕೆಯನ್ನು ತನ್ನ ಮೊಟಾರ್‌ ಸೈಕಲ್‌ಗೆ ಕಟ್ಟಿ ಕೊಂಡು ಹೋಗಿರುವುದಾಗಿ ದೂರಿನಲ್ಲಿ ವಿವರಿಸಿದ್ದಾರೆ. ಕಡಬ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.