ಅವನ ಹೆಂಡತಿಯನ್ನು ಇವನು ಪ್ರೀತಿಸಿದ್ದ | ರಕ್ತ ಕಾರುತ್ತಿದ್ದ ಆಕೆಯನ್ನು ಈತ ತೊಡೆಯ ಮೇಲೆ ಮಲಗಿಸಿಕೊಂಡು ಸಂತೈಸುತ್ತಿದ್ದ !

ವಿಜಯಪುರ: ಇದೊಂದು ವಿಚಿತ್ರ ಪ್ರೇಮ ಕಥೆ. ಇಷ್ಟಕ್ಕೂ ಇದಕ್ಕೆ ಪ್ರೇಮ ಅನ್ನ ಬೇಕಾ ಅಥವಾ ಇದು ಮಾಮೂಲಾಗಿ ಲೋಕದಲ್ಲಿ ಮತ್ತೊಂದು ಹಾದರದ ಕಥೆಯಾ ? ನೀವೇ ನಿರ್ಧರಿಸಿ.

ಆಕೆ ಅಲ್ಲಿ ವಿಷ ಕುಡಿದು ವಿಲವಿಲ ಒದ್ದಾಡುತ್ತಾ ರಕ್ತಕಾರುತ್ತಿದ್ದ ಸಮಯ. ಆತ ತನ್ನ ಪ್ರೇಯಸಿಯನ್ನ ತೊಡೆಯ ಮೇಲೆ ಮಲಗಿಸಿಕೊಂಡು ಸಂತೈಸುತ್ತಿದ್ದ. ಅವರಿಬ್ಬರು ಹಾದಿ ಹರೆಯದ ಇಬ್ಬರು ಹುಡುಗ-ಹುಡುಗಿಯರು ಪರಸ್ಪರ ಪ್ರೀತಿಸಿ ಕೊಂಡು, ಇನ್ನೇನು ಪ್ರೀತಿ ದಕ್ಕುವುದಿಲ್ಲ ಎನ್ನುವ ಸಂದರ್ಭದಲ್ಲಿ ವಿಷ ಕುಡಿದು ಸಾಯುವ ಪ್ರಸಂಗವಲ್ಲ.

ಇಲ್ಲಿನ ಕಥಾನಕದ ದುರಂತ ಪ್ರೇಮಿಗಳು ಲೋಕ ಅರಿಯದ ಕುಮಾರ ಕುಮಾರಿಯರಲ್ಲ. ಅವರಿಬ್ಬರಿಗೂ ಬೇರೆಬೇರೆ ಮದುವೆಯಾಗಿತ್ತು. ಇಬ್ಬರಿಗೂ ತಮ್ಮ ತಮ್ಮ ಸಂಗಾತಿಗಳಿಂದ ಮಕ್ಕಳಿದ್ದಾರೆ. ಹಾಗೆ ಪ್ರೀತಿಸಲು ತಮ್ಮದೇ ಸಂಗಾತಿ ಮತ್ತು ಮಕ್ಕಳು ಇದ್ದರೂ ಅವರು ಇನ್ನೊಬ್ಬರ ಸಂಗಾತಿಯನ್ನು ಅವರು ಬಯಸಿದ್ದರು.

ಪ್ರೀತಿಯಾ ಅಥವಾ ಹಾದರವಾ ?!

ಗಂಗೂರು ಗ್ರಾಮದ ಅಶೋಕ ಮತ್ತು ರೇಣುಕಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಗಂಡ ಕೆಲಸದ ಮೇಲೆ ಕೇರಳಕ್ಕೆ ಹೋಗಿದ್ದ. ಈ ವೇಳೆ ಹಡಲಗೇರಿ ಗ್ರಾಮದ ಬಸವರಾಜ್ ಕಿಲಾರಹಟ್ಟಿ ಜತೆ ಸಲುಗೆ ಬೆಳೆಸಿಕೊಂಡಿದ್ದ ರೇಣುಕಾ , ಗಂಡ ದೂರದ ಊರಿಗೆ ಹೆಂಡತಿ ಮಕ್ಕಳನ್ನು ಸಾಕಲು ದುಡಿಯಲು ಹೋಗಿದ್ದರೆ, ಆಕೆ ಬೇರೊಬ್ಬನ ( ಬಸವರಾಜ್ ) ಬಾಹುಗಳಲ್ಲಿ ಕರಗುತ್ತಿದ್ದಳು. ಬಸವರಾಜ್ ಗೂ ಬೇರೊಬ್ಬಳೊಂದಿಗೆ ಮದುವೆ ಆಗಿದೆ. ಆಕೆಗೆ ಆತ 6 ಮಕ್ಕಳನ್ನು ಕರುಣಿಸಿ ಪುಣ್ಯ ಕಟ್ಟಿಕೊಂಡಿದ್ದಾನೆ!

ಬೇರೆ ಬೇರೆ ಮದುವೆಯಾಗಿದ್ದರೂ ಅನೈತಿಕ ಸಂಬಂಧ ಹೊಂದಿದ್ದ ಜೋಡಿ ಮಂಗಳವಾರ ಬಿದಕುಂದಿ ಗ್ರಾಮದ ಹೊರವಲಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ವಿಷ ಸೇವಿಸಿದೆ. ಕುಡಿದ ಅಮಲಿನಲ್ಲಿದ್ದ ಬಸವರಾಜ್, ಕಡಿಮೆ ವಿಷ ಸೇವಿಸಿದ್ದು, ರೇಣುಕಾ ಹೆಚ್ಚು ವಿಷ ಕುಡಿದಿದ್ದಳು. ಅಸ್ವಸ್ಥಗೊಂಡ ಒದ್ದಾಡಿತ್ತಿದ್ದ ರೇಣುಕಾಳನ್ನು ಆತ ತನ್ನ ತೊಡೆಯ ಮೇಲೆ ಮಲಗಿಸಿಕೊ0ಡು ಪ್ರಿಯಕರ ಬಸವರಾಜ್ ಸಂತೈಸುತ್ತಿದ್ದ. ಪ್ರಿಯಕರನ ತೊಡೆ ಮೇಲೆಯೇ ಬಾಯಿಂದ ರಕ್ತಕಾರಿ ರೇಣುಕಾ ಒದ್ದಾಡುತ್ತಿದ್ದಳು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದರು. ಇವರಿಬ್ಬರ ಚೀರಾಟ ಕೇಳಿ ಸ್ಥಳಕ್ಕೆ ಬಂದ ಕುರಿಗಾಯಿಗಳು ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದರೂ ಅವರಿಗೆ ಕೈಮುಗಿದ ಪ್ರಿಯಕರ ಎಲ್ಲಿಗೂ ಹೋಗಲ್ಲ, ನಾವಿಬ್ಬರೂ ಒಟ್ಟಾಗಿ ಸಾಯುತ್ತೇವೆ ಎಂದು ಪ್ರೇಯಸಿಯ ಕೆನ್ನೆ ಸವರುತ್ತಲೇ ಇದ್ದ. ನೋಡನೋಡುತ್ತಿದ್ದಂತೆ ಪ್ರೇಯಸಿ ಅವನ ಮಡಿಲಲ್ಲೇ ಪ್ರಾಣ ಬಿಟ್ಟಿದ್ದಾಳೆ. ಇಂತಹ ಭಯಾನಕ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಈ ಅಮಾನವೀಯ ಘಟನೆಯ ದೃಶ್ಯ ಸ್ಥಳೀಯ ರು ತಮ್ಮ ಮೊಬೈಲನಲ್ಲಿ ಸೆರೆ ಮಾಡಿಕೊಂಡು, ನಂತರ ಅದು ವೈರಲ್ ಆಗಿದೆ.

ರೇಣುಕಾ ಸತ್ತ ಮೇಲೆಯೇ ಬಸವರಾಜ್ ಅಲ್ಲಿಂದ ಕದಲಿದ್ದು. ನಂತರ ಆತನನ್ನು ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯನ್ನು ಆಸ್ಪತ್ರೆಗೆ ಕೂಡ ಸೇರಿಸದೆ ತೊಡೆಯ ಮೇಲೆ ಮಲಗಿಸಿಕೊಂಡು ಇದ್ದದ್ದು ಆಕೆಯನ್ನು ಸಾಯಿಸಲೆಂದೆ ಅಥವಾ ಆಕೆಯ ಮೇಲಿನ ಪ್ರೀತಿಯಿಂದಲಾ ? ಎಂಬ ಊರವರಲ್ಲಿ ಮೂಡಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು, ಸತ್ಯ ಹುಡುಕುವ ಜರೂರು ಕೆಲಸ ಪೊಲೀಸರಿಂದ ಆಗಬೇಕಿದೆ.

Leave A Reply

Your email address will not be published.