ಸೆಲ್ಫಿ ಕ್ರೇಜ್ | ಕಾಲು ಜಾರಿ ಸಮುದ್ರದ ಅಲೆಗಳ ಮಧ್ಯೆ ಮರೆಯಾದ ಯುವಕ

Share the Article

ಕಾರವಾರ: ಲಾಕ್ ಡೌನ್ ಇರುವುದರಿಂದ ಸಮಯ ಕಳೆಯಲು ಅಕ್ಕನ ಮನೆಗೆ ಬಂದ ಯುವಕ ಸಮುದ್ರದ ಬಳಿ ಸೆಲ್ಫಿ ಹುಚ್ಚಿಗೆ ನೀರು ಪಾಲಾಗಿದ್ದಾನೆ.

ಸಮುದ್ರದ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಆತ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ. ಕೊಪ್ಪಳ ಮೂಲದ ಅಭಿಷೇಕ್ ಹನುಮಂತ ಭೋಯಿ (25) ಮೃತ ಯುವಕ.

ಲಾಕ್‍ಡೌನ್ ಇರುವುದರಿಂದ ತನ್ನೂರಿಂದ ಕುಮಟಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ಕನ ಮನೆಗೆ ಬಂದಿದ್ದ ಅಭಿಷೇಕ್. ಕುಮಟಾ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿರುವ ಸಮುದ್ರದ ಭಾಗಕ್ಕೆ ತಿರುಗಾಡಲು ತೆರಳಿದ್ದರು. ಈ ವೇಳೆ ಸೆಲ್ಫಿ ತೆಗೆದುಕೊಳ್ಳಲು ಸಮುದ್ರದ ದಂಡೆಯ ಬಳಿ ಇಳಿದಿದ್ದಾರೆ.

ಸೆಲ್ಫಿ ಕ್ರೇಜ್ ನಲ್ಲಿ. ಮೈಮರೆತಿದ್ದಾಗ ಆತ ಕಾಲುಜಾರಿ ಸಮುದ್ರದಲ್ಲಿ ಬಿದ್ದಿದ್ದಾನೆ. ತಕ್ಷಣ ದಡಕ್ ಅಪ್ಪಳಿಸುವ ಅಲೆಗಳ ಮಧ್ಯೆ ಕಾಣೆಯಾಗಿದ್ದಾನೆ.
ಇದೀಗ ಕುಮಟಾದ ಅಳವೆ ದಂಡೆಯಲ್ಲಿ ಶವ ಪತ್ತೆಯಾಗಿದೆ. ಈ ಸಂಬಂಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.