ಹವಾಯಿ ಸ್ಲಿಪ್ಪರ್ ಭೇದಿಸಿದ ಕೊಲೆ ರಹಸ್ಯ

ರಾಜಧಾನಿ ಬೆಂಗಳೂರಿನಲ್ಲಿ ಮರ್ಡರ್ ಸ್ಟೋರಿಗೆ ಸಿನಿಮೀಯ ಶೈಲಿಯಲ್ಲಿ ಕ್ಲೈಮಾಕ್ಸ್ ಸಿಕ್ಕಿದೆ. ವಿಶೇಷವೆಂದರೆ ಚಪ್ಪಲಿ ಒಂದು ಮರ್ಡರ್ ಮಿಸ್ಟರಿ ಯನ್ನು ಭೇದಿಸಿದೆ.

ಈ ಘಟನೆಯು ಬೆಂಗಳೂರು ನಗರದ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಾಬುಸಾಬ್ ಪಾಳ್ಯ ಬಿಡಿಎ ಪಾರ್ಕ್ ನಲ್ಲಿ ನಡೆದಿದೆ.

ಕಳೆದ ಮೇ 15ರಂದು ವ್ಯಕ್ತಿಯೋರ್ವನನ್ನು ಬರ್ಬರವಾಗಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಬೆಳಕಿನ ಜಾವ ವಾಕಿಂಗ್ ಬಂದ ಸ್ಥಳೀಯರು, ಬರ್ಬರವಾಗಿ ಕೊಲೆಯಾಗಿದ್ದ ವ್ಯಕ್ತಿಯನ್ನು ನೋಡಿ, ಹೆಣ್ಣೂರು ಪೊಲೀಸರಿಗೆ ವಿಚಾರ ತಿಳಿಸಿದ್ದರು. ಸ್ಥಳಕ್ಕೆ ಬಂದ ಪೊಲೀಸರಿಗೆ ಯಾವುದೇ ಸಾಕ್ಷಿ ಸಿಕ್ಕಿರಲಿಲ್ಲ.

ತನಿಖೆ ಕೈಗೊಂಡ ಪೊಲೀಸರಿಗೆ ಯಾವುದೇ ಟೆಕ್ನಿಕಲ್ ಸಾಕ್ಷಿ ಕೂಡಾ ಸಿಕ್ಕಿರಲಿಲ್ಲ. ಜೊತೆಗೆ ಕೊಲೆಯಾದವನು ಮತ್ತು ಕೊಲೆ ಮಾಡಿದವನು ಕೂಡ ಮೊಬೈಲ್ ಬಳಸುತ್ತಿರಲಿಲ್ಲ ಅನ್ನೋ ವಿಚಾರ ಗೊತ್ತಾಗಿ ಕೇಸು ಹಳ್ಳ ಹಿಡಿಯುವ ಲಕ್ಷಣ ಇತ್ತು.

ಆದರೆ ಕೊಲೆಯಾದ ನಂತರ ಕೊಲೆಗಾರ ಕೊಲೆ ಮಾಡಿ ನಂತರ ರಕ್ತ ತುಳಿದುಕೊಂಡು ಹೋಗಿರುವ ಚಪ್ಪಲಿ ಗುರುತು ಪತ್ತೆಯಾಗಿತ್ತು. ಪೊಲೀಸರು ಗುರುತಿನ ಬೆನ್ನು ಹತ್ತಿದ್ದಾರೆ. ಪೊಲೀಸರು, ಆ ಪಾರ್ಕ್ ಗೆ ಬರುವ ಅಕ್ಕಪಕ್ಕದಲ್ಲಿ ವಾಸವಾಗಿರುವ ಸುಮಾರು 60ಕ್ಕೂ ಹೆಚ್ಚು ಜನರ ಕಾಲಿನ ಮೇಲೆ ದೃಷ್ಟಿ ಬೀರಿದ್ದರು. ಆಲ್ಲಿರುವವವರ ಚಪ್ಪಲಿಯನ್ನು ಕಲೆಕ್ಟ್ ಮಾಡಿ ತೊಳೆದು, ಮರಳ ಮೇಲೆ ನಡೆಸಿ. ಪೆರೇಡ್ ಮಾಡಿದ್ದರು.

ಈ ವೇಳೆ ಆರೋಪಿ ಸತೀಶ್ ಎಂಬವನ ಚಪ್ಪಲಿ ಗುರುತು, ಸ್ಥಳದಲ್ಲಿದ್ದ ಗುರುತು ಹೊಂದಾಣಿಕೆ ಆಗಿತ್ತು. ತಕ್ಷಣ ಆತನನ್ನು ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸರು ತಮ್ಮ ವಿಶೇಷ ಸ್ಟೈಲ್ ನಿಂದಾವಿಚಾರಣೆ ನಡೆಸಿದ್ದಾರೆ. ಆಗ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಕೊಲೆ ವಿಚಾರ ಹೊರಬಿದ್ದಿದೆ.

ಅಂದು ಕೊಲೆಯಾದ ಅಶೋಕ್ ಮತ್ತು ಸತೀಶ್ ಇಬ್ಬರೂ ಒಟ್ಟಿಗೆ ಒಂದೇ ರೂಮಿನಲ್ಲಿ ವಾಸಿಸುತ್ತಿದ್ದರು. ಅದು ಸಣ್ಣ ರೂಮು. ಅಲ್ಲಿ ಸಣ್ಣ ರೂಮಿನ ಒಳಗೆ ಮಲಗುವ ಜಾಗದ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಉಂಟಾಗಿ, ಕೊನೆಗೆ ಇದು ಕೊಲೆಯಲ್ಲಿ ಪರ್ಯವಸನ ಆಗಿದೆ ಅನ್ನೋದನ್ನು ಆತ ಬಾಯಿ ಬಿಟ್ಟಿದ್ದಾನೆ.

Leave A Reply

Your email address will not be published.