ಮಂಗಳೂರು | ಯುವತಿ ಮನೆಗೆ ತೆರಳಿ ದಾಂಧಲೆ ಪ್ರಕರಣ, 7 ಮಂದಿ ಅಂದರ್

ನಗರದ ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ ಆರೋಪದಲ್ಲಿ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರೌರಿಶೀಟರ್ ರಂಜಿತ್, ಅವಿನಾಶ್, ಪ್ರಜ್ವಲ್, ದೀಕ್ಷಿತ್, ಹೇಮಂತ್, ಧನುಶ್, ಯತಿರಾಜ್ ಬಂಧಿತ ಆರೋಪಿಗಳು.

ಶಕ್ತಿನಗರದ 20 ವರ್ಷದ ಯುವತಿ ಮನೆಯಲ್ಲಿ ಈ ಗಲಾಟೆ ನಡೆದಿತ್ತು. ಹೇಮಂತ್ ಎಂಬಾತ ಯುವತಿಗೆ ನಿತ್ಯ ಕಿರುಕುಳ ನೀಡುತ್ತಿದ್ದು, ಇತ್ತೀಚೆಗೆ ಯುವತಿ ಮನೆಗೆ ರೌಡಿ ಶೀಟರ್ ಗಳ ಜೊತೆ ತೆರಳಿ, ದಾಂಧಲೆ ನಡೆಸಿದ್ದ.

ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗಲಾಟೆಯಲ್ಲಿ ಭಾಗಿಯಾಗಿದ್ದ ಏಳು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

Leave A Reply

Your email address will not be published.