ಕೊಯಿಲ : ಕಾನೂನು ಪಾಲನೆಯೊಂದಿಗೆ ಮೂಲಭೂತ ಸೌಕರ್ಯ ಈಡೇರಿಕೆಗೂ ಸೈ | ಗ್ರಾಮಸ್ಥರ ನೆರವಿನೊಂದಿಗೆ ಬರೆಮೇಲು -ವಳಕಡಮ ರಸ್ತೆ ದುರಸ್ತಿಗೊಳಿಸಿದ ಬೀಟ್ ಪೊಲೀಸ್ ಹರೀಶ್
![](https://hosakannada.com/wp-content/uploads/2021/06/IMG-20210602-WA0009.jpg)
![](https://hosakannada.com/wp-content/uploads/2024/07/First.jpeg)
ಕಾನೂನು ಪಾಲನೆಯ ಜತೆಗೆ ಜನತೆಯ ಮೂಲಭೂತ ಸೌಕರ್ಯ ಕಲ್ಪಿಸಲು ಗ್ರಾಮಸ್ಥರ ನೆರವಿನೊಂದಿಗೆ ಕಡಬ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೇಬಲ್ ಕೊಯಿಲ ಬೀಟ್ ಪೋಲಿಸ್ ಹರೀಶ್ ಕೈ ಜೋಡಿಸುವ ಮೂಲಕ ಎಲ್ಲರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
![](https://hosakannada.com/wp-content/uploads/2024/07/Middle.jpeg)
ಕೊಯಿಲ ಗ್ರಾಮದ ಬರೆಮೇಲು ವಳಕಡಮ ರಸ್ತೆ ,ಹಾಗೂ ವಳಕಡಮ ಹಿರಿಯ ಪ್ರಾಥಮಿಕ ಶಾಲೆ- ಹಾಲಿನ ಸೊಸೈಟಿ ರಸ್ತೆಯ ಬೀಜತ್ತಳಿಕೆ ಹಾಗೂ ಕೆರೆಕೋಡಿ ಎಂಬಲ್ಲಿ ರಸ್ತೆ ಹದಗೆಟ್ಟು ಸಂಚಾರಕ್ಕೆ ಕಷ್ಟಕರವಾಗಿದ್ದು,ಈ ಕುರಿತು ಕೊನೆಮಜಲು-ವಳಕಡಮ ವ್ಯಾಪ್ತಿ ಯ ಗಾಮಸ್ತರ ನೆರವಿನಿಂದ ಶ್ರಮದಾನದ ಮೂಲಕ ಕೆಸರು ತೆಗೆದು ಚರಳು ಹೊಯಿಗೆ ಹಾಕಿ ದುರಸ್ತಿಗೊಳಿಸಲಾಯಿತು.
ಬೀಟ್ ಪೊಲೀಸ್ ಹರೀಶ್ ಹಾಗೂ ಗಾಮ ಪಂಚಾಯತ್ ಸದಸ್ಯ ಚಂದ್ರಶೇಖರ ಮಾಳ ಅವರ ನೇತ್ರತ್ವದಲ್ಲಿ ಶ್ರಮದಾನ ನಡೆಯಿತು.
ರಸ್ತೆ ದುರಸ್ತಿ ಶ್ರಮದಾನದಲ್ಲಿ ಗ್ರಾ.ಪಂ.ಮಾಜಿ ಸದಸ್ಯ ರಾದ ವಿನೋದರ ಮಾಳ,ಶೀನಪ್ಪ ಗೌಡ ವಳಕಡಮ,ಸಂಜೀವ ಗೌಡ ಕೊನೆಮಜಲು,ದಯಾನಂದ ದಾಸ್,ಪ್ರದೀಪ್ ಮಾಳ,ಗೋವಿಂದಯ್ಯ ಭಟ್,ಚೇತನ್ ಕೊನೆಮಜಲು,ಚೇತನ್ ಪಾಣಿಗ,ದೀಪಕ್ ನೂಜಿಮಾರ್,ಮಹೇಶ್ ಮಾಳ,ಜಿತಿನ್ ರಕ್ಷಿತ್ ಕೊನೆಮಜಲು,ನಿರುಪಮ್,ಶ್ರೀಧರ್, ಗೋಪಾಲಕೃಷ್ಣ ಕೆರೆಕೋಡಿ,ರಾಜೇಶ್ ಎಡೆಚ್ಚಾರು ಪಾಲ್ಗೊಂಡಿದ್ದರು.
ಅಲ್ಲದೆ ಈ ರಸ್ತೆಯ ದುರಸ್ತಿಗೆ ಬೇಕಾದ 2 ಲಾರಿ, ಮತ್ತು 1 ಪಿಕಪ್ ಚರಳು ಹೊಯಿಗೆ ನೀಡಿ ಲೋಡ್ ಮಾಡಲು ಚಂದ್ರ ಹಾಸ ಪರಂಗಾಜೆ,ಅಜೀಜ್,ಲತೀಫ್ ಬಿ.ಎ ಹಾಗೂ ಮರಳು ಸಾಗಾಣಿಕೆ ಗೆ ಲಾರಿ ,ಪಿಕಪ್ ನೀಡಿದ ಸುರೇಶ್ ಕುಂಡಡ್ಕ,ಹಾಗೂ ಲತೀಫ್ ಅಂಬಾರವರು ಕೈ ಜೋಡಿಸಿದರು.
ಹರೀಶ್ ಅವರು ಈ ಹಿಂದೆ ಪುತ್ತೂರು ನಗರ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ನರಿಮೊಗರು ವ್ಯಾಪ್ತಿಗೆ ದಾನಿಗಳ ನೆರವಿನಿಂದ ಸಿಸಿ ಕೆಮರಾಗಳನ್ನು,ಎಚ್ಚರಿಕೆ ಫಲಕಗಳನ್ನು ಅಳವಡಿಸಿ ಜನಮನ್ನಣೆಗೆ ಪಾತ್ರರಾಗಿದ್ದರು.ಅಲ್ಲದೆ ಆ ಭಾಗದಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದರು.