ತಂದೆಯ ಅಂತ್ಯಸಂಸ್ಕಾರದ ವೇಳೆ ಕುಸಿದು ಬಿದ್ದು ಮಗ ಸಾವು | ಮುಗಿಲು ಮುಟ್ಟಿದ ಬಂಧುಗಳ ಆಕ್ರಂದನ
![](https://hosakannada.com/wp-content/uploads/2021/06/IMG-20210602-WA0012.jpg)
ಬಂಟ್ವಾಳ : ತಂದೆಯ ಅಂತ್ಯ ಸಂಸ್ಕಾರದ ವೇಳೆ ಮಗನೂ ಹೃದಯಾಘಾತದಿಂದ ಕುಸಿದು ಬಿದ್ದು ಪುತ್ರನೂ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದಿಂದ ವರದಿಯಾಗಿದೆ.
![](https://hosakannada.com/wp-content/uploads/2024/07/First.jpeg)
ಪುಣಚ ಗ್ರಾಮದ ಬೈಲುಗುತ್ತು ಕೊಪ್ಪಳ ನಿವಾಸಿ ಕೆ.ಪಿ.ಟಿ.ಯ ನಿವೃತ ಪ್ರೊಫೆಸರ್ ಭುಜಂಗ ಶೆಟ್ಟಿ ಅವರು ಕೋವಿಡ್ ನಿಂದ ನಿಧನರಾಗಿದ್ದು,ಅವರ ಅಂತ್ಯಕ್ರಿಯೆಯನ್ನು ಸೇವಾ ಭಾರತಿ ಕಾರ್ಯಕರ್ತರು ಕೋವಿಡ್ ನಿಯಾಮವಳಿಯಂತೆ ನೆರವೇರಿಸುತ್ತಿದ್ದ ವೇಳೆ ಅವರ ಮಗ ಶೈಲೇಶ್ ಶೆಟ್ಟಿ ಅವರು ಕುಸಿದು ಬಿದ್ದು ಅಸ್ವಸ್ಥಗೊಂಡರು.
![](https://hosakannada.com/wp-content/uploads/2024/07/Middle.jpeg)
ಕೂಡಲೇ ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟರು.