ಎತ್ತು ತಿವಿದು ಮಹಿಳೆ ಸಾವು

ಉಡುಪಿ: ಎತ್ತೊಂದು ಮಹಿಳೆಯೋರ್ವರಿಗೆ ತಿವಿದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ನಡೆದಿದೆ.

ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮದ ಸುರ್ಗೋಳ್ಳಿ ಅಬ್ಬಿಕಟ್ಟೆ ಯ ಸುಬ್ರಾಯ ನಾಯ್ಕ ಎಂಬವರ ಪತ್ನಿ ಸೀತು (52) ಎಂಬವರೇ ಎತ್ತಿನ ದಾಳಿಗೆ ಮೃತಪಟ್ಟವರು.

ಇವರು ಮೇ 18ರಂದು ಕೊಟ್ಟಿಗೆಯಲ್ಲಿದ್ದ ದನವನ್ನು ಮೇಯಲು ಕಟ್ಟಲು ಹೋದಾಗ ಅಲ್ಲಿಯೇ ಮೇಯಲು ಬಿಟ್ಟ ಎತ್ತು ಅವರಿಗೆ ಗುದ್ದಿತ್ತೆನ್ನಲಾಗಿದೆ. ಪರಿಣಾಮ ಸೀತು ಅವರ ಕುತ್ತಿಗೆಗೆ ಗಂಭೀರ ಸ್ವರೂಪದ ಗಾಯ ಗೊಂಡು ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದರು.

ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು ಎನ್ನಲಾಗಿದೆ.

ಈ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.