‘ಉಪೇಂದ್ರ ಎಂಬ ನಾನು ಪ್ರಜೆಗಳ ಹೆಸರಿನಲ್ಲಿ…….’ | ನನಗೆ ಮುಖ್ಯಮಂತ್ರಿ ಆಗಬೇಕು, ನನ್ನನ್ನು ಗೆಲ್ಲಿಸ್ತೀರಾ ? – ಉಪೇಂದ್ರ ಟ್ವೀಟ್ !

ನಾನು ಉಪೇಂದ್ರ. ನಾನು ಈ ರಾಜ್ಯದ ಮುಖ್ಯಮಂತ್ರಿ ಆಗ್ಬೇಕು. ಚುನಾವಣೆಯಲ್ಲಿ ಸ್ಪರ್ಧಿಸಿದರೆ? ನೀವು ನನ್ನನ್ನು ಗೆಲ್ತಿಸ್ತೀರಾ? ಎಂದು ರಿಯಲ್ ಸ್ಟಾರ್ ಉಪೇಂದ್ರ ಜನರನ್ನು ಕೇಳಿದ್ದಾರೆ.

ಈ ಕುರಿತುು ನಿನ್ನೆ ಟ್ವೀಟ್ ಮಾಡಿರುವ ಉಪೇಂದ್ರ ಅವರು, ನಾನು ಸಮಾಜ ಸೇವೆ ಮಾಡ್ತಿದ್ದೀನಿ. ರೈತರಿಂದ  ಬೆಳೆ ಕೊಂಡು ಉಚಿತವಾಗಿ ಕಷ್ಟದಲ್ಲಿರೋರಿಗೆ ಹಂಚಿದ್ತಿನಿ. ಚುನಾವಣೆ ಸಮಯದಲ್ಲಿ ಹೋರಾಟಾನೂ ಮಾಡ್ತೀನಿ. ಆಡಳಿತ, ವಿಪಕ್ಷ ಜನರಿಗೆ ಏನೂ ಮಾಡದೆ ಸಂಪೂರ್ಣ ವಿಫಲ ಆಗದೆ ಎಂದು ನಾನು ಮಾಧ್ಯಮಗಳ ಮೂಲಕ ಕೂಗಿ ಹೇಳುತ್ತೇನೆ. ಇವರನ್ನೆಲ್ಲ ಕಿತ್ತುಹಾಕಿ ನನ್ನನ್ನು ಅಧಿಕಾರಕ್ಕೆ ತನ್ನಿ.

ನಿಮ್ಮ ಮುಂದಿನ ಉಜ್ವಲ ಭವಿಷ್ಯಕ್ಕೆೆಬೇಕಾದ ಕೆಲಸ ನಾನು ಮಾಡ್ತಿನಿ. ಹಗಲು ರಾತ್ರಿ ಕಷ್ಟಪಟ್ಟು ಸುವರ್ಣ ಕರ್ನಾಟಕ ಮಾಡ್ತೀನಿ. ನನ್ನನ್ನು ಗೆಲ್ತಿಸ್ತೀರಾ? ಎಂದು ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಅವರು ಜನರನ್ನು ಕೇಳಿಕೊಂಡಿದ್ದಾರೆ.

1 Comment
  1. Sainatha Rai KS says

    ಚುನಾವಣೆ ಗೆಲ್ಲೋದಿರ್ಲಿ..,
    ಇವನ ಅಭ್ಯರ್ಥಿ ಗಳು ಠೇವಣಿ ಉಳಿಸಿಕೊಂಡ್ರೆ ಅದೇ ಸಾಧನೆ.

Leave A Reply

Your email address will not be published.