6 ಜಿಲ್ಲೆಗಳ ಉಸ್ತುವಾರಿ ಸಚಿವರ ಪಟ್ಟಿ ಪ್ರಕಟ | ಸುಳ್ಯದ ಅಂಗಾರ ಅವರಿಗೆ ಚಿಕ್ಕಮಗಳೂರಿನ ಉಸ್ತುವಾರಿ

6 ಜಿಲ್ಲೆಗಳ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ತವರು ಜಿಲ್ಲೆಗಳ ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದವರಿಗೆ ತೀವ್ರ ನಿರಾಸೆಯಾಗಿದೆ.

ಸುಳ್ಯ ಶಾಸಕ ಅಂಗಾರ ಅವರಿಗೆ ಚಿಕ್ಕಮಂಗಳೂರು ಜಿಲ್ಲೆಯ ಉಸ್ತುವಾರಿ ವಹಿಸಲಾಗಿದೆ.
ಡಿಸಿಎಂ ಗೋವಿಂದ ಕಾರಜೋಳ ಅವರನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.

ಬೆಳಗಾವಿ ಜಿಲ್ಲೆಯ ಮೇಲೆ ಕಣ್ಣಿಟ್ಟು ಕೂತಿದ್ದರು ಸಚಿವ ಉಮೇಶ್ ಕತ್ತಿ. ಆದರೆ ಕತ್ತಿ ಅವರನ್ನು ಬಾಗಲಕೋಟೆ ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.

ಬಾಗಲಕೋಟೆ ಜಿಲ್ಲೆ ಮೇಲೆ ಕಣ್ಣಿಟ್ಟಿದ್ದ ಸಚಿವ ನಿರಾಣಿಗೆ ಕಲಬುರ್ಗಿ ಜಿಲ್ಲೆ ಉಸ್ತುವಾರಿ ನೀಡಲಾಗಿದೆ.

ಫಲಿತಾಂಶದ ದಿನವೇ BSY ಮಹತ್ವದ ನಿರ್ಧಾರ: ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ತವರು ಜಿಲ್ಲೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್

ಸಚಿವ ಎಸ್.ಅಂಗಾರ – ಚಿಕ್ಕಮಗಳೂರು ಜಿಲ್ಲೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ-ಬೆಳಗಾವಿಉಮೇಶ್ ಕತ್ತಿ- ಬಾಗಲಕೋಟೆ ಜಿಲ್ಲೆ
ಸಚಿವ ಅರವಿಂದ ಲಿಂಬಾವಳಿ- ಬೀದರ್ ಜಿಲ್ಲೆ
ಸಚಿವ ಎಂಟಿಬಿ ನಾಗರಾಜ್- ಕೋಲಾರ ಜಿಲ್ಲೆ
ಸಚಿವ ಮುರುಗೇಶ್ ನಿರಾಣಿ -ಕಲಬುರ್ಗಿ ಅವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ.

Leave A Reply

Your email address will not be published.