ಜಿಹಾದಿಯ ಮಾತು ಕೇಳಿ ಕನ್ನಡ ಚಿತ್ರನಟಿ, ನಾಯಕಿ ಶನಾಯ ಕಾಟ್ವೆ ಸ್ವಂತ ಅಣ್ಣನನ್ನೆ ಮುಗಿಸಿದಳು !!

ಮೊನ್ನೆ ಮೊನ್ನೆ ಏಪ್ರಿಲ್ 9ರಂದು ಜಿಹಾದಿಯ ಕೈಯಲ್ಲಿ ನಡೆದ ರಾಕೇಶ್ ಕಾಟ್ವೇ ಎಂಬ ಅಮಾಯಕ ಹುಡುಗನ ಮರ್ಡರ್ ಮಿಸ್ಟರಿ ನಿಧಾನವಾಗಿ ತನ್ನ ಗಂಟು ಬಿಚ್ಚಿಕೊಳ್ಳುತ್ತಿದೆ.

ಅವತ್ತು ನಿಯಾಜ್ ಮತ್ತವನ ಜಿಹಾದಿ ಮಿತ್ರರು ಸೇರಿಕೊಂಡು ರಾಕೇಶನನ್ನು ಮುಗಿಸಿ ಹಾಕಿದ್ದರು. ವಿಚಿತ್ರವೆಂದರೆ ರಾಕೇಶ್ ಮಿಸ್ಸಿಂಗ್ ಆಗಿದ್ದರೂ ಒಂದು ಕಂಪ್ಲೇಂಟು ಕೊಡಲಿಕ್ಕೆೆ ಅಂತ ಆತನಿಗೆ ಯಾರೂ ಇರಲಿಲ್ಲ.
ಒಬ್ಬಾಕೆ ಸೆಲೆಬ್ರಿಟಿ ತಂಗಿ ಇದ್ದರೂ ಆಕೆ ಪೊಲೀಸರಿಗೆ ದೂರು ನೀಡದೆ ನಿಗೂಢವಾಗಿ ಸುಮ್ಮನಿದ್ದಳುು !!

ಮೃತ ರಾಕೇಶ್ ಚಿಕ್ಕಂದಿನಿಂದಲೂ ಅಪ್ಪ ಅಮ್ಮನಿಲ್ಲದೇ ಬೆಳೆದ ಹುಡುಗ. ಅನಾಥವಾಗಿದ್ದ ಆತನನ್ನು ಹುಬ್ಬಳ್ಳಿಯ ಒಂದು ಕುಟುಂಬದ ದತ್ತು ಪಡೆದಿತ್ತು. ಆ ಕುಟುಂಬಕ್ಕೆ ಆವಾಗಲೇ ಒಂದು ಹೆಣ್ಣು ಮಗು ಇತ್ತು. ಅವಳೇ ಇವತ್ತು ಹಲವು ಕನ್ನಡ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ ಅಭಿನೇತ್ರಿ ಶನಾಯ ಕಾಟ್ವೇ !

ವರ್ಷಗಳ ಹಿಂದೆ ಶನಾಯಳ ತಾಯಿಯೂ ಮೃತಪಟ್ಟಿದ್ದಾರೆ. ನಿಯಾಜ್ ಎಂಬಾತನೊಂದಿಗೆ ಶನಾಯಗೆ ಹೈಸ್ಕೂಲ್‌ನಲ್ಲಿದ್ದಾಗಲೇ ಜಿಹಾದಿ ನಿಯಾಜ್ ನ ಜತೆ ಲವ್ ಶುರುವಾಗಿತ್ತು. ಇದಕ್ಕೆ ರಾಕೇಶ ಅಡ್ಡಿಯಾಗಿದ್ದ. ಅದುವೇ ರಾಕೇಶನ ಕೊನೆಗೆೆೆ ಮುನ್ನುಡಿ ಬರೆದಿತ್ತುು.

ಸಿನಿಮಾವೊಂದರ ಧ್ವನಿ ಸುರುಳಿ ಬಿಡುಗಡೆಗಾಗಿ ಏ.9ರಂದು ಹುಬ್ಬಳ್ಳಿಗೆ ಬಂದಿದ್ದ ಶನಾಯ ತನ್ನ ಪ್ರಿಯಕರನ ಮನೆಯಲ್ಲಿ ಉಳಿದುಕೊಂಡಿದ್ದಳು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ರಾಕೇಶನಿಗೆ ಬೈಪಾಸ್ ಬಳಿ ಡ್ರಾಪ್ ಮಾಡುವ ನೆಪದಲ್ಲಿ ಹೋದ ನಿಯಾಜ್ ಮತ್ತವನ ತಂಡ ಆತನ ಕತ್ತು ಹಿಸುಕಿ ಕೊಂದಿದ್ದರು. ಮೃತದೇಹವನ್ನ ಕಾರಿನಲ್ಲಿ ಹಾಕಿಕೊಂಡು ಶಿಮ್ಲಾ ನಗರದ ತನ್ನ ಮನೆಯ ಹತ್ತಿರ ಬಂದಿದ್ದ.

ನಿಯಾಜ ನ ಮನೆಯಲ್ಲಿದ್ದ ಶನಾಯ ಬಳಿ ‘ನಿನ್ನ ಅಣ್ಣನಿಗೆ ಯಾರೋ ಹೊಡೆದಿದ್ದಾರೆ. ಆಸ್ಪತ್ರೆಗೆ ತೋರಿಸಬೇಕು. ನೀನು ಕೇಶ್ವಾಪುರದಲ್ಲಿನ ನನ್ನ ಹೊಸ ಬಾಡಿಗೆ ಮನೆಗೆ ಹೋಗು’ ಎಂದು ತಾನೇ ಆಕೆಯನ್ನು ಕಾರಿನಲ್ಲಿ ಹತ್ತಿಸಿದ್ದ. ಆ ಕಾರಿನಲ್ಲಿ ಕುಳಿತ ಭಂಗಿಯಲ್ಲೇ ಇದ್ದ ಸಹೋದರನ ಶವದೊಂದಿಗೆ ಶನಾಯ ಸಂಚರಿಸಿದ್ದಳು. ಅಣ್ಣ ಸತ್ತಿದ್ದರೂ, ಏನೂ ಆಗದಂತೆ ಆಕೆ ಮಾಮೂಲಾಗಿ ಇದ್ದಳು !
ನಂತರ ನಯಾಜ್ ಶಿಮ್ಲಾ ನಗರದ ಮನೆಗೆ ರಾಕೇಶ್ ನನ್ನು ಕರೆದೊಯ್ಯಲಾಯಿತು. ಆನಂತರ ನಡೆದದ್ದು ಮಾತ್ರ ಅತ್ಯಂತ ಹೀನಾತಿ ಹೀನ ಕೃತ್ಯ.

ಮನೆಯಲ್ಲಿ ತರಕಾರಿ ತುಂಡರಿಸಿದಂತೆ ಕತ್ತರಿಸಿದರು!!

ಅಲ್ಲಿ ನಿಯಾಜ್ ನ ಮನೆಗೆ ರಾಕೇಶನನ್ನು ಕರೆದುಕೊಂಡು ಹೋದ ಆರೋಪಿಗಳು, ಅಲ್ಲಿ ರಾಕೇಶ್ ನ ದೇಹವನ್ನು ಆತನ ಗೆಳೆಯರು ಸೇರಿಕೊಂಡು ಕತ್ತರಿಸಿದ್ದಾರೆ.  ಗೃಹಿಣಿಯರು ತರಕಾರಿ ತುಂಡರಿಸುವಂತೆ, ಆತನ  ದೇಹವನ್ನು ಎದುರಿಗಿಟ್ಟುಕೊಂಡು, ನಿಧಾನವಾಗಿ ರುಂಡ ಮುಂಡ ಕೈ ಕಾಲು ಹೀಗೆ ಬೇರೆ ಬೇರೆ ಮಾಡಿ ತಮ್ಮ ಕಾರಿನಲ್ಲಿ ಹಾಕಿಕೊಂಡು 2 ದಿನ ಸರಿಯಾದ ಜಾಗಕ್ಕಾಗಿ ಹುಡುಕಾಡಿದ್ದಾರೆ. ಆನಂತರ ಊರ ಹೊರಗೆ ಪೆಟ್ರೋಲ್ ಎರಚಿ ಸುಟ್ಟು ಬಿಸಾಡಿ ಬಂದಿದ್ದಾರೆ.

ಇದಂ ಪ್ರೇಮಂ ಜೀವನಂ !!

ಕನ್ನಡ, ತೆಲುಗು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ
ಮಾಡೆಲಿಂಗ್‌ನಲ್ಲಿ ಮಿಂಚುತ್ತಿದ್ದ ಶನಾಯ ಕಾಟ್ವೆ ತನ್ನ ತಲೆಯ ಮೇಲೆ ಬಂಡೆ ಕಲ್ಲು ಹಾಕಿಕೊಂಡಿದ್ದಾಳೆ. ಆಕೆ 2018ರಲ್ಲಿ ತೆಲುಗಿನ ‘ಇದಂ ಪ್ರೇಮಂ ಜೀವನಂ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿ³ಸಿದ್ದರು. ನಂತರ ರಾಘವ ದ್ವಾರ ನಿರ್ದೇಶನದ ‘ಒಂದು ಗಂಟೆಯ ಕಥೆ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಳು. ಇತ್ತೀಚೆಗಷ್ಟೇ ಚಿತ್ರೀಕರಣ ಪೂರ್ಣಗೊಳಿಸಿರುವ ಯೂಸೂಫ್ ಬಾನ್ ನಿರ್ದೇಶನದ ‘ನೋಟಾ ಬಾಂಬೆ’ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಬಣ್ಣ ಹಚ್ಚಿದ್ದಾಳೆ. ಏಪ್ರಿಲ್ 10ರಂದು ‘ಛೋಟಾ ಬಾಲವೆ’ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭ ಯೋಜಿಸಲಾಗಿತ್ತು. ಅದಕ್ಕಾಗಿ ಶನಾಯ ಏಪ್ರಿಲ್ 9ರಂದು ಹುಬ್ಬಳ್ಳಿಗೆ ಬಂದಿದ್ದಳು. ಅಂದು ರಾತ್ರಿಯೇ ಕೊಲೆ ನಡೆದಿತ್ತು. ಮರುದಿನ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಶನಾಯ ಭಾಗಿಯಾಗಿರಲಿಲ್ಲ ಎಂಬುದು ಗಮನಾರ್ಹ ಸಂಗತಿ.

ಎಲ್ಲ ಮುಗಿಸಿ ವಾಪಸ್ ಮನೆಗೆ ಬಂದು ಕಾರಿನ ಡಿಕ್ಕಿ ನೋಡಿದರೆ ರುಂಡ ಮರೆತು ಅಲ್ಲೇ ಉಳಿದಿತ್ತು. ಅದನ್ನು ಏಪ್ರಿಲ್ 11ರಂದು ಮತ್ತೆ ಡಿಸ್ಪೋಸ್ ಮಾಡಲೆಂದು ಕಾರಿನಲ್ಲಿ ಹೊರಟಿದ್ದಾರೆ ಆರೋಪಿಗಳು. ಆ ಸಂದರ್ಭದಲ್ಲಿ ಅವರು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಕೊಲೆಗೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆ ಪೊಲೀಸರು ಐ.18ರಂದು ಆರೋಪಿಗಳಾದ ನಿಯಾಜ್ ಅಹ್ಮದ ಕಾಟಗಾರ, ತೌಸೀಫ್ ಚನ್ನಾಪುರ, ಅಲ್ತಾಫ ಮುಲ್ಲಾ ಹಾಗೂ ಅಮನ್ ಗಿರಣಿವಾಲೆ ಎಂಬುವರನ್ನು ಬಂಧಿಸಿದ್ದರು. ಗುರುವಾರ ನಿಯಾಜ್‌ ಸಹೋದರ ಮತ್ತು ತಂದೆಯನ್ನು ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಶನಾಯಳ ವಿಚಾರಣೆಯನ್ನು ಮೂರ್ನಾಲ್ಕು ದಿನಗಳ ಹಿಂದೆ ಆರಂಭಿಸಿದ್ದರು. ಆದರೆ, ಆಕೆ ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಳು. ಆದರೆ, ಆಕೆಯ ಮೊಬೈಲ್ ಟವರ್, ಆಪಲ್ -ಫೋನ್ ಮತ್ತು ಸಿಸಿ ಟಿವಿ ಫೂಟೇಜ್ ಸಾಕ್ಷಿಯಿಂದ ಆಕೆಯೂ ಭಾಗಿಯಾಗಿರುವ ಸತ್ಯಾಂಶ ಬಹಿರಂಗಗೊಂಡಿದೆ. ಸುಂದರ ಮುಖದ ಹಿಂದೆ ಅಡಗಿದ್ದ ಒಂದು ಭೀಭತ್ಸ ಮುಖವಾಡ ಇದ್ದದ್ದು ಈಗ ಕಳಚಿ ಬಿದ್ದಿದೆ.

Leave A Reply

Your email address will not be published.