ಇಬ್ಬರ ಜತೆ ಯುವಕನ ಪ್ರೇಮ‌ ಪ್ರಸಂಗ | ಮೋಸದಿಂದ ಒಬ್ಬಾಕೆಯನ್ನು ನೇಣು ಹಾಕಿಸಿದ ಧೂರ್ತ

ಇಲ್ಲೊಬ್ಬ ಕಿರಾತಕ ಇಬ್ಬರು ಯುವತಿಯರನ್ನು ಪ್ರೀತಿಸುವ ನೆಪದಲ್ಲಿ ಒಬ್ಬಾಕೆಯನ್ನು ಉಪಾಯವಾಗಿ ನೇಣು ಹಾಕಿಕೊಳ್ಳುವಂತೆ ಮಾಡಿದ ಬಗ್ಗೆ ಚಾಮರಾಜನಗರದಿಂದ ವರದಿಯಾಗಿದೆ.

ಚಾಮರಾಜನಗರ ಜಿಲ್ಲೆಯ
ಕೊಳ್ಳೇಗಾಲ ತಾಲೂಕಿನ‌ ಆಂಜನೇಯಪುರ ಗ್ರಾಮದ ಸಿದ್ದಪ್ಪಸ್ವಾಮಿ ಅಲಿಯಾಸ್ ಉಪೇಂದ್ರ ಎಂಬಾತನೇ ಈ ಕಹಾನಿಯ ಕತರ್ನಾಕ್

ಉಪೇಂದ್ರ ಇಬ್ಬರು ಯುವತಿಯರನ್ನು ಪ್ರೀತಿಸುತ್ತಿದ್ದ.

ಈತ ಬೆಂಗಳೂರಿನಲ್ಲಿ ನರ್ಸಿಂಗ್​ ಓದುತ್ತಿದ್ದ ನಂಜಮ್ಮಣಿಗೆ ಗೊತ್ತಾಗದಂತೆ ಆಂಜನೇಯಪುರದಲ್ಲಿ ಮತ್ತೊಬ್ಬ ಪ್ರೇಯಸಿ ಜತೆಗೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದನು.

20 ದಿನದ ಹಿಂದೆ ನಂಜಮಣಿಯು ಗ್ರಾಮಕ್ಕೆ ಬಂದಾಗ ಈತನ ವಿಷಯ ಗೊತ್ತಾಗಿದೆ. ಸಿದ್ದಪ್ಪಸ್ವಾಮಿ ಅಲಿಯಾಸ್ ಉಪೇಂದ್ರ, ನನ್ನನ್ನು ಪ್ರೀತಿಸುತ್ತಿದ್ದ ಎಂದು ಅದಕ್ಕೆ ಸಾಕ್ಷೀಕರಿಸುವ ಫೋಟೋವನ್ನು ನಂಜಮ್ಮಣಿ ತನ್ನ ಮನೆಯಲ್ಲಿ ತೋರಿಸಿದ್ದಾಳೆ.

ಈ ಕುರಿತು ಮಗಳ ಪ್ರಿಯಕರನ್ನು ಆಕೆಯ ಪಾಲಕರು ಪ್ರಶ್ನಿಸಿದ್ದು, ಇಬ್ಬರನ್ನೂ ಮದುವೆ ಆಗುತ್ತೇನೆ. ಯಾರಿಗೂ ಮೋಸ ಮಾಡುವುದಿಲ್ಲ ಎಂದಿದ್ದಾನೆ. ಇದಕ್ಕೆ ಯುವತಿಯ ಪಾಲಕರು ಒಪ್ಪಿಲ್ಲ.

ಇದಾದ ಬಳಿಕ ನಂಜಮ್ಮಣಿಗೆ ಕರೆ ಮಾಡಿದ ಸಿದ್ದಪ್ಪಸ್ವಾಮಿ, ನಿಮ್ಮ‌ ಮನೆಯಲ್ಲಿ ತೊಂದರೆ ಕೊಡುತ್ತಿದ್ದಾರೆ. ಇಬ್ಬರು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಾವಿನಲ್ಲಿ ಜತೆಯಾಗೋಣ ಎಂದಿದ್ದಾನೆ.

ಪ್ರಿಯಕರನ ಪ್ರೀತಿಯಲ್ಲೇ ತೇಲುತ್ತಿದ್ದ ನಂಜಮಣ್ಣಿ,ಪ್ರಿಯಕರ ಹೇಳುತ್ತಿರುವುದು ನಿಜವೆಂದು ನಂಬಿ ಬಂದಿದ್ದು, ಇಬ್ಬರು ಒಟ್ಟಿಗೆ ನೇಣು ಹಾಕಿಕೊಂಡಿದ್ದಾರೆ.

ಇತ್ತ ನೇಣು ಹಾಕಿಕೊಳ್ಳುವ ನಾಟಕ ಮಾಡಿದ್ದ ಸಿದ್ದಪ್ಪ , ಅದರೆ ಪ್ರೇಯಸಿ ನಂಜಮಣ್ಣಿ ನಿಜವಾಗಿಯೂ ನೇಣಿಗೆ ಕೊರಳೊಡ್ಡಿದ್ದಾಳೆ.

ಸಿದ್ದಪ್ಪ ಪರಾರಿಯಾಗಿದ್ದು,ಮಗಳನ್ನು ಕಳೆದುಕೊಂಡ ನಂಜಮಣ್ಣಿಯ ಪೋಷಕರು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave A Reply

Your email address will not be published.