ಯುವವಾಹಿನಿ ಬೆಳ್ತಂಗಡಿ ಘಟಕದಿಂದ ತಾಲೂಕು ಪಂಚಾಯತ್ ಕಛೇರಿಗೆ ಸ್ಯಾನಿಟೈಸರ್ ಯಂತ್ರ ಹಸ್ತಾಂತರ

ಬೆಳ್ತಂಗಡಿ: ಮಾ.31 ಯುವವಾಹಿನಿ ಬೆಳ್ತಂಗಡಿ ಘಟಕದಿಂದ ತಾಲೂಕು ಪಂಚಾಯತ್ ಕಛೇರಿ ಬೆಳ್ತಂಗಡಿಗೆ ಸ್ಯಾನಿಟೈಸರ್ ಯಂತ್ರವನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಎಮ್ ಕೆ ಪ್ರಸಾದ್ ಶಿರ್ಲಾಲು,ಕಾರ್ಯದರ್ಶಿ ಗುರುರಾಜ್ ಗುರಿಪಳ್ಳ,ಸಂಘಟನ ಕಾರ್ಯದರ್ಶಿಗಳಾದ ಸುರೇಂದ್ರ ಕೋಟ್ಯಾನ್,ಕರುಣಾಕರ ಬೆಳ್ತಂಗಡಿ, ಘಟಕದ ಸಲಹೆಗಾರರಾದ ಸುಧಾರಮಾನಂದ ಪ್ರಶಾಂತ್ ಜಶನ್ ಗೃೂಪ್ಸ್ ಬೆಳ್ತಂಗಡಿ ಕೇಂದ್ರ ಸಮಿತಿ ನಿರ್ದೇಶಕ ಪ್ರಶಾಂತ್ ಮಚ್ಚಿನ, ತಾಲೂಕು ಪಂಚಾಯತ್ ಮೆನೇಜರ್ ಸುವರ್ಣ ಹೆಗ್ಗಡೆ,ಸಹಾಯಕ ಲೆಕ್ಕಾದಿಕಾರಿ,ಶಕುಂತಲಾ ಶೆಣೈ, ಸಹಾಯಕ ಲೆಕ್ಕಪರಿಶೋಧಕ ಗಣೇಶ್ ಪೂಜಾರಿ,
ಮತ್ತು ಶೇಖರ್ ಉಪಸ್ಥಿತರಿದ್ದರು.

Leave A Reply

Your email address will not be published.