ಸವಣೂರು| ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣದ ವಿರುದ್ಧ ಮೆಸ್ಕಾಂ ಕಛೇರಿಯಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ
![](https://hosakannada.com/wp-content/uploads/2024/07/First.jpeg)
ಭಾರತ ವಿದ್ಯುತ್ ಸಚಿವಾಲಯವು 2003ರ ವಿದ್ಯುತ್ ಕಾಯ್ದೆಯನ್ನು ತಿದ್ದುಪಡಿ ತಂದು, ಪ್ರಸ್ತಾಪಿತ 2020ರಲ್ಲಿ ಎಲ್ಲಾ ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣಗೊಳಿಸುವ ನೀತಿಯ ವಿರುದ್ಧ ವಿವಿದೆಡೆ ಪ್ರತಿಭಟನೆ ನಡೆದಿದೆ.
![](https://hosakannada.com/wp-content/uploads/2024/07/Middle.jpeg)
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಂಘ ನೀಡಿದ ಕರೆಗೆ ಬೆಂಬಲವಾಗಿ ಸವಣೂರು ಮೆಸ್ಕಾಂ ಶಾಖಾ ಕಛೇರಿಯ ಮುಂಭಾಗದಲ್ಲಿ ಸವಣೂರು ಮೆಸ್ಕಾಂ ಶಾಖಾಧಿಕಾರಿ ನಾಗರಾಜ್ ಹಾಗೂ ಸಿಬ್ಬಂದಿಗಳು ಜೂ.1ರಂದು ಸಾಂಕೇತಿಕವಾಗಿ ಕೈಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.