ನಿರಂತರವಾಗಿ ನಾಯಿ ಬೊಗಳಿತ್ತು ಅಂತ ನಾಯಿಗೆ ಗುಂಡು ಹಾರಿಸಿದ | ನಾಯಿ ಸಾಯಲಿಲ್ಲ, ಆತ ಸತ್ತ !

ಪಟನಾ : ಮನುಷ್ಯನಿಗೆ ದುರಹಂಕಾರ ಬಂದರೆ, ಅದು ಆತನನ್ನು ಯಾವೆಲ್ಲ ರೀತಿ ವರ್ತಿಸುವಂತೆ ಮಾಡಬಹುದು ಎಂಬುದಕ್ಕೆ ಮತ್ತು ಅದಕ್ಕೆ ಮನುಷ್ಯ ಹೇಗೆಲ್ಲಾ ತಾನು ಊಹಿಸದ ರೀತಿಯಲ್ಲಿ ಶಿಕ್ಷೆಗೆ ಒಳಗಾಗಬಹುದು ಅನ್ನುವುದಕ್ಕೆ ಪಾಟ್ನಾದಲ್ಲಿ ನಡೆದ ಈ ಘಟನೆಯೇ ಸಾಕ್ಷಿ.

ಆತನ ನೆರೆಮನೆಯ ನಾಯಿಯ ನಿರಂತರವಾಗಿ ಬೊಗಳುತ್ತಿತ್ತು. ನಾಯಿಯ ಬೊಗಳುವಿಕೆಯಿಂದ ತಾಳ್ಮೆ ಕಳೆದುಕೊಂಡ ಗೋಪಾಲ್​ ರಾಂ ಅದನ್ನು ಕೊಲ್ಲಲು ಮೂರು ಸುತ್ತು ಗುಂಡು ಹಾರಿಸಿದ. ಆದರೆ, ನಾಯಿ ಸಾಯಲಿಲ್ಲ. ಬದಲಿಗೆ ಒಂದು ಗುಂಡು ಅಲ್ಲೇ ಇದ್ದ 10 ವರ್ಷದ ನಾಯಿಯ ಮಾಲೀಕ ವಿನೋದ್​ ರಾಮ್​ನ ಪುತ್ರಿ ಭೂಮಿಕಾ ಕುಮಾರಿಯ ಕೈಗೆ ತಗುಲಿತು.
ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಗುಂಡು ಹಾರಿಸಿದ ವ್ಯಕ್ತಿಯನ್ನು ಹಿಡಿದು ಮನಸೋ ಇಚ್ಛೆ ಥಳಿಸಿದರು. ಆಗ ಗಂಭೀರವಾಗಿ ಗಾಯಗೊಂಡ ವಿನೋದ್​ ರಾಮ್​ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಬಿಹಾರದ ರೊಹಟಾಸ್​ ಜಿಲ್ಲೆಯ ಬೇಲದಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಈ ಬಗ್ಗೆ ದರಿಹಾತ್​ ಪೊಲೀಸ್​ ಠಾಣೆಯಲ್ಲಿ ಎರಡೆರಡು ಪ್ರತ್ಯೇಕ ದೂರು ದಾಖಲಾಗಿದೆ. ಪೊಲೀಸರಿಗೆ ಹೇಳಿಕೆ ನೀಡಿರುವ ವಿನೋದ್​ ರಾಮ್​, ಆತನ ಪುತ್ರಿಯ ಮೇಲೆ ಗುಂಡಿನ ದಾಳಿ ನಡೆಸಿದ ಎಂಬ ಕಾರಣಕ್ಕಾಗಿ ಗ್ರಾಮಸ್ಥರು ಗೋಪಾಲ್​ ರಾಮ್​ನನ್ನು ಥಳಿಸಿದರು. ಕೊಲ್ಲುವ ಉದ್ದೇಶ ಇರಲಿಲ್ಲ. ಆದರೆ, ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆತ ಮೃತಪಟ್ಟ ಎಂದಿದ್ದಾರೆ. ಮತ್ತೊಂದು ಎಫ್​ಐಆರ್​ನಲ್ಲಿ ಸಾರ್ವಜನಿಕವಾಗಿ ಗುಂಡಿನ ದಾಳಿ ನಡೆಸಿದ ಗೋಪಾಲ್​ ರಾಮ್​ ಸಾರ್ವಜನಿಕರ ಜೀವವನ್ನು ಅಪಾಯಕ್ಕೆ ಒಡ್ಡಿರುವ ಕಾರಣದಿಂದ ಆರೋಪಿಸಲಾಗಿದೆ.
ನಾಯಿ ಬೊಗಳಿದರೆ, ಸಣ್ಣ ಕಲ್ಲಲ್ಲಿ ಆಗುವ ಕೆಲಸವನ್ನು ಗುಂಡಿನಿಂದ ಬಗೆಹರಿಸಲು ಹೋದ ದುರಹಂಕಾರಿ, ಸ್ವತಃ ಬೇರೊಂದು ರೀತಿಯಲ್ಲಿ ಬಲಿಯಾದದ್ದು ದುರಂತ ಹೌದು, ಪಾಠವೂ ದಿಟ.

1 Comment
  1. Nishanth K d says

    Vinod ram sthaladalle satthidane antha baredidira innond kade gopal ram janara hodethakke satthiddane antha ide.. Idu yav thara news?

Leave A Reply

Your email address will not be published.