ಸುಬ್ರಹ್ಮಣ್ಯ ಪರಿಸರದಲ್ಲಿ ಗಾಳಿ ಮಳೆ | ರಸ್ತೆ ಸಂಚಾರ ಸ್ಥಗಿತ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಪರಿಸರದಲ್ಲಿ ಇಂದು ಮುಂಜಾನೆ ಭಾರೀ ಗಾಳಿ ಮಳೆ ಸುರಿದ ಪರಿಣಾಮವಾಗಿ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರಬಿದ್ದು, ಕೆಲಹೊತ್ತು ಸುಬ್ರಹ್ಮಣ್ಯ-ಏನೆಕಲ್ಲು ರಸ್ತೆ
ಸಂಚಾರ ಸ್ಥಗಿತಗೊಂಡ ಘಟನೆ ಸಂಭವಿಸಿದೆ.

ಏನೆಕಲ್ಲು ಬಳಿಯ ಬೂದಿಪಳ್ಳ ಎಂಬಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮವಾಗಿ ಕೆಲಹೊತ್ತು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಮೆಸ್ಕಾಂ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸೇರಿ ಮರ ತೆರವುಗೊಳಿಸಿದರು.

ಬಾರೀ ಗಾಳಿ ಮಳೆಯಿಂದಾಗಿ ಸುಬ್ರಹ್ಮಣ್ಯಪರ್ವತಮುಖಿ ಸಮೀಪ ಮರಗಳು ಹಾಗೂ ಮರದ ದೊಡ್ಡ ದೊಡ್ಡ ಕೊಂಬೆಗಳು ಮುರಿದು ಬಿದ್ದ ಪರಿಣಾಮವಾಗಿ ಹಲವು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

Leave A Reply

Your email address will not be published.