ಸವಣೂರು ಸಿಎ ಬ್ಯಾಂಕ್‌ನಿಂದ ನೆರವು

ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಆರ್ಥಿಕವಾಗಿ ತೀರ ಸಂಕಷ್ಟದಲ್ಲಿರುವ ಸಂಘದ ವ್ಯಾಪ್ತಿಗೆ ಒಳಪಟ್ಟ ಸದಸ್ಯರಿಗೆ ಸವಣೂರು ಸಿಎ ಬ್ಯಾಂಕಿನ ಉಪಾಧ್ಯಕ್ಷರಾದ ತಾರನಾಥ ಕಾಯರ್ಗ ಇವರ ಶಿಫಾರಸ್ಸಿನ ಮೇರೆಗೆ  ಇಡ್ಯಾಡಿ ನಿವಾಸಿ  ವಾರಿಜಾ ಮತ್ತು  ಯಮುನಾ ಇವರಿಗೆ  ಸಂಘದ ಸದಸ್ಯರ ಕಲ್ಯಾಣ ನಿಧಿಯಿಂದ  ತಲಾ ರೂ .5000ಗಳ ನೆರವಿನ ಚೆಕ್ ನ್ನು ವಿತರಿಸಲಾಯಿತು.


ಸಂಘದ ಅಧ್ಯಕ್ಷ ಗಣೇಶ್ ನಿಡ್ವಾಣ್ಣಾಯ, ಉಪಾಧ್ಯಕ್ಷರಾದ ತಾರಾನಾಥ ಕಾಯರ್ಗ, ನಿರ್ದೇಶಕರುಗಳಾದ ಕರುಣಾಕರ ಪೂಜಾರಿ ಪಟ್ಟೆ,ಮಹಾಬಲ ಶೆಟ್ಟಿ ಕೊಮ್ಮಂಡ, ನಾರಾಯಣ ಗೌಡ ಪೂವ, ತಿಮ್ಮಪ್ಪ ಗೌಡ ಮುಂಡಾಲ, ಚೇತನ್ ಕುಮಾರ್ ಕೊಡಿಬೈಲು, ಶ್ರೀಮತಿ ನಿರ್ಮಲ ಕೇಶವ, ತನಿಯಪ್ಪ ನಾಯ್ಕ, ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪಿ. ಉಪಸ್ಥಿತರಿದ್ದರು.

Leave A Reply

Your email address will not be published.