ಪ್ರಸಾದ್ ಅತ್ತಾವರ್ ನೇತೃತ್ವದ ರಾಮ್ ಸೇನಾದಿಂದ ಹಿರಿಯ ನಟರಿಗೆ ನೆರವು
ರಾಮ್ ಸೇನಾ(ರಿ) ಕರ್ನಾಟಕ ಇದರ ವತಿಯಿಂದ ಬೆಂಗಳೂರು ನಗರದಲ್ಲಿ 25 ಕನ್ನಡ ಚಲನಚಿತ್ರ ಹಿರಿಯ ಹಾಗೂ ಪೋಷಕ ನಟರಿಗೆ ದಿನಬಳಕೆಯ ವಸ್ತುಗಳನ್ನು ವಿತರಿಸಲಾಯಿತು.
![](https://hosakannada.com/wp-content/uploads/2024/07/First.jpeg)
ರಾಮ್ ಸೇನಾ (ರಿ) ಕರ್ನಾಟಕ ಇದರ ಸಂಸ್ಥಾಪಕ ಅಧ್ಯಕ್ಷರಾದ ಪ್ರಸಾದ್ ಅತ್ತಾವರ, ಸಚಿನ್ ದಳವಾಯಿ,ಗೋಪಿನಾಥ್, ಶ್ಯಾಮ್ ಸುಂದರ್ ಮುಂತಾದವರಿಂದ ಹಾಸ್ಯನಟ ಟೆನ್ನಿಸ್ ಕೃಷ್ಣ ನೇತೃತ್ವದಲ್ಲಿ ಹಿರಿಯ ನಟ ಉಮೇಶ್ ಸೇರಿದಂತೆ 25 ಕ್ಕೂ ಮಿಕ್ಕಿ ಪೋಷಕ ಕಲಾವಿದರಿಗೆ ದಿನಬಳಕೆಯ ದಿನಸಿಯನ್ನು ವಿತರಿಸಲಾಯಿತು.
![](https://hosakannada.com/wp-content/uploads/2024/07/Middle.jpeg)
ರಾಮ್ ಸೇನಾ ವತಿಯಿಂದ ಮಂಗಳೂರು ಸೇರಿದಂತೆ ಈಗಾಗಲೇ ಹಲವು ಜಿಲ್ಲೆಗಳಲ್ಲಿ ದಿನನಿತ್ಯ ಕೂಲಿ ಕಾರ್ಮಿಕರಿಗೆ ಹಾಗೂ ಬಡವರಿಗೆ ಎರಡು ಹೊತ್ತಿನ ಊಟದ ವ್ಯವಸ್ಥೆಯನ್ನು ಕಲ್ಪಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
Comments are closed.