ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲೆ ಇದರ ಆಶ್ರಯದಲ್ಲಿ ಅರ್ಹ ಫಲಾನುಭವಿಗಳಿಗೆ ಆಹಾರ ಸಾಮಗ್ರಿಗಳ ಕಿಟ್ ಕೊಡುಗೆ


ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲೆ ಇದರ ಆಶ್ರಯದಲ್ಲಿ ರಾಜ್ಯ ಘಟಕದ ಗೌರವಾಧ್ಯಕ್ಷ ಡಾಕ್ಟರ್ ಬಿಎಂ ಉಮರ್ ಹಾಜಿ ಕೊಡುಗೆಯಾಗಿನೀಡಿದ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಕರ್ನಾಟಕ ರಕ್ಷಣಾ ವೇದಿಕೆಸ್ವಾಭಿಮಾನಿ ಬಣದ ಕೊಡಗು ಜಿಲ್ಲಾಅಧ್ಯಕ್ಷ ಉನೈಸ್ ಪೆರಾಜೆ ರವರ ನೇತೃತ್ವದಲ್ಲಿ ಏಪ್ರಿಲ್ 13ರಂದು ಸುಮಾರು 23 ಕುಟುಂಬಗಳಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮಡಿಕೇರಿ ತಾಲ್ಲೂಕು ಅಧ್ಯಕ್ಷ ನೌಫಾಲ್, ಜಿಲ್ಲಾಮಾಧ್ಯಮ ಘಟಕದ ಅಧ್ಯಕ್ಷ ಸತೀಶ್ ಹೊದ್ದೆಟ್ಟಿ, ಪೆರಾಜೆ ವಲಯ ಕಾರ್ಯದರ್ಶಿ ಬಾಸಿತ್, ಸದಸ್ಯರುಗಳಾದ ಅಶ್ರಫ್ ಪಿಎಂ, ಮುನೀರ್ ಪಿಕೆ, ನಾಸಿರ್ ಪಿಎಸ್, ಇಲ್ಯಾಸ್, ಹಾರಿಸ್,ಎಬಿ ಬಶೀರ್, ಇಶಾನ್ ಖಾದರ್ ನಾಸೀರ್ ರಾಘವೇಂದ್ರ, ಜುನೈದ್, ಜಾಹಿರ್, ಸತ್ತಾರ್, ಅಜರ್, ಮೊದಲಾದವರು ಉಪಸ್ಥಿತರಿದ್ದರು.

ವರದಿ : ಹಸೈನರ್ ಜನಗರ

Comments are closed.