ಬಿಸಿಲಿನ ತಾಪಕ್ಕೆ ಕಂಗಾಲಾದವರಿಗೆ ಎಸ್.ವೈ.ಎಸ್, ಎಸ್ಸೆಸ್ಸೆಫ್ ವತಿಯಿಂದ ನೀರು ವಿತರಣೆ

ಸುಳ್ಯ ತಾಲೂಕು ಎಸ್.ವೈ.ಎಸ್ ಹಾಗೂ ಎಸ್ಸೆಸ್ಸೆಫ್ ಸಮಿತಿಗಳ ವತಿಯಿಂದ ಲಾಕ್ ಡೌನ್ ಸಮಯಗಳಲ್ಲಿ ರೇಷನ್ ಅಂಗಡಿಗಳ ಮುಂದೆ ಕ್ಯೂ ನಿಂತು, ಬಿಸಿಲಿನ ತಾಪಕ್ಕೆ ಬಾಯಾರಿದವರಿಗೆ ಕುಡಿಯುವ ನೀರು ವಿತರಿಸಲಾಯಿತು.

ಸರಕಾರವು ಪಡಿತರ ವಿತರಣೆ ಆರಂಭಿಸಿದ್ದು, ಅದನ್ನು ಪಡೆಯಲು ಸಿ.ಎ ಬ್ಯಾಂಕ್, ಲ್ಯಾಂಪ್ ಸೊಸೈಟಿ, ಡಿ.ಸಿ.ಸಿ ಬ್ಯಾಂಕ್ ಗಳ ಮುಂದೆ ಹಾಗೂ ಅಂಗಡಿಗಳ ಮುಂದೆ ಕ್ಯೂ ನಿಂತಿದ್ದ ಬಿಸಿಲ ಬೇಗೆಗೆ ಬಾಯಾರಿಕೆಯಿಂದ ಕಂಗಾಲಾದವರಿಗೆ ಎಸ್.ವೈ.ಎಸ್ ಇಸಾಬಾ ಟೀಂ ಹಾಗೂ, ಎಸ್ಸೆಸ್ಸೆಫ್ ಕ್ಯೂ ಟೀಂ ಸದಸ್ಯರು ಬಾಟಲಿ ನೀರು ಖರೀದಿಸಿ ಸರ್ವರಿಗೂ ವಿತರಣೆ ಮಾಡಿದರು.

ಈ ಸಂದರ್ಭ ಆರೀಸ್ ಬೋರುಗುಡ್ಡೆ, ಸಿದ್ಧೀಕ್, ಶರೀಫ್, ರಶೀದ್, ನೌಶಾದ್, ಅಬ್ದುಲ್ ರಹ್ಮಾನ್, ಆಸೀಫ್ ಮುಂತಾದವರು ಕಾರ್ಯಾಚರಣೆಯಲ್ಲಿ ತೊಡಗಿದ್ದರು

1 Comment
  1. Erica.N says

    I like this website it’s a master piece! Glad
    I discovered this ohttps://69v.topn google.Raise blog range

Leave A Reply

Your email address will not be published.