ಕುಂಡಡ್ಕ | ಮೊಗೇರ ದೈವಸ್ಥಾನ, ಕೊರಗಜ್ಜ, ಪರಿವಾರ ದೈವಗಳ ಪ್ರತಿಷ್ಠೆ, ನೇಮೋತ್ಸವ ಮುಂದೂಡಿಕೆ
ಸುಳ್ಯ : ತಾಲೂಕಿನ ಪೆರುವಾಜೆ ಗ್ರಾಮದ ಕುಂಡಡ್ಕ ಶ್ರೀ ಮೊಗೇರ ದೈವಸ್ಥಾನ, ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ಸಾನಿಧ್ಯ ಇದರ ಪ್ರತಿಷ್ಠಾ ಕಲಶಾಭಿಷೇಕ ಹಾಗೂ ನೇಮೋತ್ಸವ ಕಾರ್ಯಕ್ರಮವು ಎ.7 ಮತ್ತು 8 ರಂದು ನಡೆಸಲು ಉದ್ದೇಶಿಸಲಾಗಿತ್ತು.
![](https://hosakannada.com/wp-content/uploads/2024/07/First.jpeg)
ಆದರೆ ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಮಿತಿಯ ಪೂರ್ವಸಿದ್ಧತಾ ಸಭೆ ದೈವಸ್ಥಾನ ವಠಾರದಲ್ಲಿ ನಡೆದು ಪ್ರತಿಷ್ಠಾ ಮತ್ತು ನೇಮೋತ್ಸವ ಮುಂದೂಡಲು ತೀರ್ಮಾನಿಸಲಾಗಿದೆ.
![](https://hosakannada.com/wp-content/uploads/2024/07/Middle.jpeg)
ಕಾರ್ಯಕ್ರಮದ ಪ್ರಯುಕ್ತ ಹೊರ ತಂದಿರುವ ಲಕ್ಕಿಡಿಪ್ ಕೂಪನ್ ಡ್ರಾ ದಿನಾಂಕವನ್ನು ಮುಂದೂಡಲಾಗಿದೆ ಎಂದು ದೈವಸ್ಥಾನ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಸಮಿತಿ ಪ್ರಕಟನೆ ತಿಳಿಸಿದೆ.