ಅರಂತೋಡಿನಲ್ಲಿ ಬೈಕ್ – ಬಸ್ ಢಿಕ್ಕಿ, ಬೈಕ್ ಸವಾರ ಮೃತ್ಯು, ಇನ್ನೋರ್ವ ಗಂಭೀರ

ಸುಳ್ಯ: ಅರಂತೋಡಿನಲ್ಲಿ ಬಸ್ ಮತ್ತು ಬೈಕ್ ಢಿಕ್ಕಿ ಹೊಡೆದುಕೊಂಡು ಬೈಕ್ನಲ್ಲಿದ್ದ ಓರ್ವ ಮೃತಪಟ್ಟ ಹಾಗೂ ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಫೆ.8 ರಂದು ಸಂಜೆ ನಡೆದಿದೆ.

ಗಾಯಾಳುವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಗಿದೆ. ಯುವಕರು ಜೋಡುಪಾಲ ಬಳಿಯ 2ನೇ ಮೊಣ್ಣಂಗೇರಿಯವರಾಗಿದ್ದು, ಮೃತಪಟ್ಟ ವ್ಯಕ್ತಿಯನ್ನು ವಿನುತ್ ಎಂದು ಗುರುತಿಸಲಾಗಿದೆ. ಗಾಯಗೊಂಡವರು ರಾಜಪ್ಪ ಎಂದು ತಿಳಿದು ಬಂದಿದೆ.
