ಪುತ್ತೂರಿನ ದರ್ಬೆಯ ಸಿ ಟಿ ಓ ರಸ್ತೆಯ ಗುಡ್ಡದಲ್ಲಿ ಆಕಸ್ಮಿಕ ಬೆಂಕಿ ಬಿದ್ದಿದೆ. ಆಕಸ್ಮಿಕ ಬೆಂಕಿ ಇದಾಗಿದ್ದು, ಅಗ್ನಿಶಾಮಕ ತಂಡ ಬೆಂಕಿ ಆರಿಸುವಲ್ಲಿ ನಿರತರಾಗಿದ್ದಾರೆ.

ಬೆಂಕಿ ಅವಘಡಕ್ಕೆ ಯಾರೋ ಸೇದಿ ಎಸೆದ ಬೀಡಿ ಕಾರಣವಿರಬಹುದೆಂದು ಜನ ಹೇಳುತ್ತಿದ್ದಾರೆ. ತಪ್ಪಿದಲ್ಲಿ ಎಲೆಕ್ಟ್ರಿವ್ಕ್ ಶಾರ್ಕ್ ಸರ್ಕ್ವಿಟ್ ಕಾರಣವಾಗಿರುವ ಸಾಧ್ಯತೆಯೂ ಇದೆ.
ಸಾವು ನೋವು ಸಂಭವಿಸಿಲ್ಲವಾದರೂ ಅರಣ್ಯ ಸಂಪತ್ತು ನಾಶವಾಗಿದೆ . ಬೇಸಿಗೆ ಪ್ರಾರಂಭವಾದುದರಿಂದ ನೆಲದ ಹುಲ್ಲುಒಣಗಿದೆ. ಜತೆಗೆ ಒಣ ತರಗೆಲೆಗಳು ಬೆಂಕಿಯನ್ನು ಬೇಗ ಹಿಡಿದುಕೊಂಡು ವ್ಯಾಪಿಸುವಂತೆ ಮಾಡುತ್ತವೆ.