Home Karnataka State Politics Updates ರಾಜ್ಯದಲ್ಲಿ ಲವ್ ಜಿಹಾದ್​ಗೆ ಅವಕಾಶ ಕೊಡಲ್ಲ, ಇದ್ರ ವಿರುದ್ಧ ಕಾನೂನು ಕ್ರಮ ಜಾರಿ : ಮಧ್ಯಪ್ರದೇಶ...

ರಾಜ್ಯದಲ್ಲಿ ಲವ್ ಜಿಹಾದ್​ಗೆ ಅವಕಾಶ ಕೊಡಲ್ಲ, ಇದ್ರ ವಿರುದ್ಧ ಕಾನೂನು ಕ್ರಮ ಜಾರಿ : ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್

Hindu neighbor gifts plot of land

Hindu neighbour gifts land to Muslim journalist

ಮಧ್ಯಪ್ರದೇಶ: ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಪ್ರಕರಣದಂತೆ ನನ್ನ ರಾಜ್ಯದಲ್ಲಿ ಲವ್ ಜಿಹಾದ್​ಗೆ ಅವಕಾಶ ನೀಡುವುದಿಲ್ಲ, ರಾಜ್ಯದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನನ್ನು ತರುತ್ತೇವೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬುಡಕಟ್ಟು ಜನಾಂಗದ ಐಕಾನ್ ತಾಂತಿಯಾ ಭಿಲ್ ಅವರ ಹುತಾತ್ಮ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ನನ್ನ ರಾಜ್ಯದ ಹೆಣ್ಣು ಮಕ್ಕಳನ್ನು ಲವ್ ಜಿಹಾದ್​​ ವಿಚಾರವಾಗಿ ಮೋಸ ಹೋಗಲು ಬಿಡಲ್ಲ ಮತ್ತು ಅವರನ್ನು 35 ತುಂಡುಗಳಾಗಿ ಕತ್ತರಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಬುಡಕಟ್ಟು ಜನಾಂಗದ ಮಹಿಳೆಯರ ಭೂಮಿಯನ್ನು ಕಬಳಿಸುವ ಉದ್ದೇಶದಿಂದ ಅನ್ಯ ಧರ್ಮದ ವ್ಯಕ್ತಿಗಳು ಮದುವೆಯಾಗಿ ಲವ್ ಜಿಹಾದ್ ಮಾಡುತ್ತಿದ್ದಾರೆ. ಇದರ ವಿರುದ್ಧದ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.ಇದು ಪ್ರೀತಿಯ ಹೆಸರಲ್ಲಿ ನಡೆಯುವ ಜಿಹಾದ್. ಈ ಲವ್ ಜಿಹಾದ್ ಆಟವನ್ನು ನಾನು ಮಧ್ಯಪ್ರದೇಶದ ನೆಲದಲ್ಲಿ ಯಾವುದೇ ಕಾರಣಕ್ಕೂ ನಡೆಯಲು ಬಿಡುವುದಿಲ್ಲ.

ಏಕರೂಪ ನಾಗರಿಕ ಸಂಹಿತೆ ಜಾರಿಯಾಗುವ ಸಮಯ ಬಂದಿದೆ. ಮಧ್ಯಪ್ರದೇಶದಲ್ಲಿ ನಾನು ಸಮಿತಿಯನ್ನು ರಚಿಸುತ್ತಿದ್ದೇನೆ ಭಾರತದ ಸಂವಿಧಾನದ 44ನೇ ವಿಧಿಯ ಅಡಿಯಲ್ಲಿ ಬರುವ ಏಕರೂಪ ನಾಗರಿಕ ಸಂಹಿತೆ, ಅವರ ಧರ್ಮ, ಲಿಂಗ, ಜಾತಿ ಇತ್ಯಾದಿಗಳನ್ನು ಲೆಕ್ಕಿಸದೆ ಎಲ್ಲಾ ನಾಗರಿಕರಿಗೆ ಸಮಾನವಾಗಿ ಅನ್ವಯಿಸುವ ವೈಯಕ್ತಿಕ ಕಾನೂನುಗಳನ್ನು ಪರಿಚಯಿಸಲು ಪ್ರಸ್ತಾಪಿಸಲಾಗುತ್ತದೆ ಎಂದು ಶಿವರಾಜ್ ಸಿಂಗ್ ಚೌಹಾಣ್ ಘಂಟಾಘೋಷವಾಗಿ ತಿಳಿಸಿದ್ದಾರೆ.