ಹದಿಹರೆಯದ ವಯಸ್ಸಿನಲ್ಲಿ ಯುವಕ ಯುವತಿಯರು ಆಡುವ ಆಟಗಳು ಮದುವೆಯ ಬಳಿಕ ಯಾವೆಲ್ಲ ರೀತಿ ತಾಪತ್ರಯ ತಂದೊಡ್ಡುತ್ತವೆ ಎಂಬುದನ್ನು ಊಹಿಸಲಿ ಪದ್ಯವಿಲ್ಲ. ಇದೀಗ ಅಂತದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಪ್ರೀತಿಸುವ ಸಮಯದಲ್ಲಿ ಮಾಡಿಕೊಂಡ ಎಡವಟ್ಟಿನಿಂದ ಯುವತಿ ಒಬ್ಬಳು ಮದುವೆಯ ಬಳಿಕ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ನಡೆದಿದೆ.


ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ಪ್ರೇಮಾ, ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆಯ ಶಿವಕುಮಾರ್ ಜೊತೆ ಕಳೆದ 11 ತಿಂಗಳ ಹಿಂದೆ ಅದ್ದೂರಿಯಾಗಿ ಮದುವೆ ನಡೆದಿತ್ತು. ಆದ್ರೆ ಮೊದಲ ರಾತ್ರಿಯಂದೇ ದಂಪತಿ ಮಧ್ಯೆ ವಿರಹ ಶುರುವಾಗಿತ್ತು. ಇದಕ್ಕೆ ಕಾರಣ, ಪ್ರೇಮಾ ಎದೆಯ ಮೇಲಿದ್ದ ಹುಡುಗನ ಹೆಸರಿನ ಹಚ್ಚೆ.
ಯಸ್, ಪ್ರೇಮ ತನ್ನ ಮದುವೆಗೂ ಮುಂಚಿತವಾಗಿಯೇ ಹೇಮಂತ್ ಎನ್ನುವ ಯುವಕನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಈ ಪ್ರೀತಿ ಎಷ್ಟು ಕುರುಡಾಗಿತ್ತು ಎಂದರೆ ಪ್ರೇಮಾಳು ಒಂದು ಚೂರು ಯೋಚಿಸದೆ ತನ್ನ ಎದೆಯ ಮೇಲೆ ಹೇಮಂತ್ ಹೆಸರನ್ನು ಹಚ್ಚೆ ಹಾಕಿಸಿದ್ದಳು. ಈ ಸಂದರ್ಭದಲ್ಲಿ ಆಕೆ ತನ್ನ ಭವಿಷ್ಯದ ಬಗ್ಗೆ ಕಿಂಚಿತ್ತು ಚಿಂತಿಸದೆ ಇರುವುದು ದುರಂತ.
ಬಳಿಕ ಪ್ರೀತಿ ಮುರಿದು ಬಿದ್ದಿದೆ. ಇತ್ತಾ ಪ್ರೇಮ ಶಿವಕುಮಾರ್ ಜೊತೆ ಹಸಮಣೆ ಏರಿದ್ದಾಳೆ. ಈ ವೇಳೆ ಮೊದಲ ರಾತ್ರಿಯಲ್ಲೇ ಹೆಂಡತಿ ಎದೆ ಮೇಲಿದ್ದ ಹೇಮಂತ್ ಹೆಸರಿನ ಹಚ್ಚೆ ನೋಡಿ ಶಿವಕುಮಾರ್ಗೆ ಕಸಿವಿಸಿಯಾಗಿತ್ತು. ಯಾರು ಈ ಹೇಮಂತ್ ಅಂತಾ ಕೇಳಿದಾಗ, ಆತ ನನ್ನ ಬೆಸ್ಟ್ ಫ್ರೆಂಡ್ ಅಂತ ಹೇಳಿದ್ದಳಂತೆ. ಈ ವಿಚಾರವಾಗಿಯೇ ನಿತ್ಯ ಇಬ್ಬರ ಮಧ್ಯೆ ಜಗಳವಾಗ್ತಿತ್ತಂತೆ.
ಮುನಿಸು, ಜಗಳದಲ್ಲೇ ಸಂಸಾರ 11 ತಿಂಗಳು ಕಳೆದಿದೆ. ಇತ್ತೀಚಿಗೆ ಇಬ್ಬರ ಮಧ್ಯೆ ತಾಳ್ಮೆಯ ಕಟ್ಟೆಯೊಡೆದು ಅನಾಹುತವಾಗಿಬಿಟ್ಟಿದೆ. ಪ್ರೇಮ ನೇ*ಣಿಗೆ ಕೊರಳೊಡ್ಡಿದ್ದಾಳೆ. ಈ ಮಧ್ಯೆ ವರದಕ್ಷಿಣೆ ಕಿ*ರುಕುಳದ ಆರೋಪವೂ ಕೇಳಿ ಬಂದಿದೆ.
ಇಲ್ಲಿ ಗಂಡ ಹೆಂಡತಿ ಇಬ್ಬರೂ ಕೂಡ ಸ್ವಲ್ಪ ಯೋಚಿಸಬೇಕಿತ್ತು. ಪ್ರೇಮ ಹೇಮಂತ್ ನನ್ನು ಪ್ರೀತಿಸುವ ಸಂದರ್ಭದಲ್ಲಿ ಯಾವುದೇ ರೀತಿಯ ನಿರ್ಧಾರಗಳನ್ನು ಮಾಡಿದ್ದರು ಕೂಡ ಜೀವನಪರ್ಯಂತ ಪರ್ಮನೆಂಟ್ ಆಗಿ ಉಳಿಯುವ ಹಚ್ಚೆ ಹಾಕಿಸಿಕೊಳ್ಳುವ ಕೆಲಸವನ್ನು ಮಾಡಬಾರದಿತ್ತು. ಇತ್ತ ಶಿವಕುಮಾರ್ ಕೂಡ ಪ್ರೇಮಾಳ ‘ಭೂತ’ದ ವಿಚಾರವನ್ನು ಕೆದಕದೆ ಭವಿಷ್ಯದ ಬಗ್ಗೆ ಚಿಂತನೆ ಮಾಡಿ ಉತ್ತಮ ಸಂಸಾರ ನಡೆಸಬಹುದಿತ್ತು. ಆದರೂ ತನ್ನ ಸಂಗಾತಿ ಇನ್ನೊಬ್ಬರ ಜೊತೆ ಈ ಪರಿ ಕ್ಲೋಸ್ ಇದ್ದಳು ಎಂಬುದನ್ನು ಯಾರು ಸಹಿಸಲು ಸಾಧ್ಯವಿಲ್ಲ. ಆದರೆ ಅದಕ್ಕೆ ಸಾವು ಎಂಬುದು ಕೊನೆಯ ಪರಿಹಾರವಲ್ಲ. ಒಟ್ಟಾರೆ ಇಲ್ಲಿ ಇಬ್ಬರದು ತಪ್ಪಿರುವ ಕಾರಣ ಯಾರನ್ನೂ ದೂರುವ ಅಗತ್ಯವಿಲ್ಲ.

