ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರೆಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆಯ ಅತ್ಯಂತ ಪ್ರಮುಖವಾದದ್ದು. ಈ ಯೋಜನೆಯಡಿ ರಾಜ್ಯದ ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ಕೊಡಮಾಡಲಾಗುತ್ತದೆ. ಆದರೆ ಇಂದು ಅನೇಕ ಕುಟುಂಬಗಳು ಈ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದನ್ನು ತಡೆಯಲು ಯೋಜನೆಯ ಫಲಾನುಭವಿ ಮನೆಯ ಯಜಮಾನಿ(ಮಹಿಳೆ) ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಕಟಿಸಿದ್ದಾರೆ. ಹಾಗಿದ್ರೆ 2ನೇ ಬಾರಿ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ನೋಡಿ ಡೀಟೇಲ್ಸ್


ಗೃಹಲಕ್ಷ್ಮಿ ಹೊಸ ಅರ್ಜಿ ಸಲ್ಲಿಕೆ ಹೇಗೆ?
* ಅರ್ಜಿ ಸಲ್ಲಿಸಲು ಮೂರು ಕಡೆ ಅವಕಾಶ ನೀಡಲಾಗಿದೆ
1. ಬೆಂಗಳೂರು ಒನ್/ ಜಿಲ್ಲಾ ಒನ್ ಕೇಂದ್ರಗಳು
2. ಕರ್ನಾಟಕ ಒನ್
3. ಗ್ರಾಮ ಒನ್ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.
ರಾಜ್ಯಾದ್ಯಂತ 15,000 ಅಧಿಕೃತ ಕೇಂದ್ರಗಳಿದ್ದು, ಅಲ್ಲೇ ಮಹಿಳೆಯರು ಹೊಸದಾಗಿ ಅರ್ಜಿ ಸಲ್ಲಿಸಬೇಕಿದೆ.
ಸೈಬರ್ ಸೆಂಟರ್ ಅಥವಾ ಮೊಬೈಲ್ ಆಪ್ಗಳಲ್ಲಿ ಅರ್ಜಿ ಸಲ್ಲಿಕೆ ಯಾವುದೇ ಅವಕಾಶವಿಲ್ಲ.
ಏನೆಲ್ಲಾ ದಾಖಲೆ ಬೇಕು?
*ಮನೆ ಯಜಮಾನಿಯ ಹೆಸರು ಮತ್ತು ಆಧಾರ್ ಸಂಖ್ಯೆ
*ಮನೆ ಯಜಮಾನಿಯ ಬ್ಯಾಂಕ್ ಖಾತೆ ವಿವರಗಳು
*ಫಲಾನುಭವಿಯ ಜಾತಿ, ಆದಾಯ ಪ್ರಮಾಣ ಪತ್ರ
*ಫಲಾನುಭವಿಯ ಪತಿಯ ಹೆಸರು ಜತೆಗೆ ಆಧಾರ್ ಸಂಖ್ಯೆ
*ಪಡಿತರ ಚೀಟಿ
ಇಷ್ಟು ದಾಖಲೆ ನೀಡಿದ್ರೆ ಮಾತ್ರ ಹೊಸ ಅರ್ಜಿ ಸಲ್ಲಿಸಲು ಅವಕಾಶವಿರಲಿದೆ.
ಪಡಿತರ ಚೀಟಿ ಕಡ್ಡಾಯ
ಅರ್ಜಿದಾರರ ಬಳಿ ರೇಷನ್ ಕಾರ್ಡ್ ಕಡ್ಡಾಯವಾಗಿ ಇರಲೇಬೇಕು. ಬಿಪಿಎಲ್ನಿಂದ ಎಪಿಎಲ್ಗೆ ವರ್ಗಾವಣೆಯಾದ ಕಾರ್ಡ್ದಾರರು ಹೊಸದಾಗಿ ಅರ್ಜಿ ಸಲ್ಲಿಸುವಂತಿಲ್ಲ.

