Home » ‘RSS ನೋಂದಣಿ ಬಗ್ಗೆ ಕ್ಲಾರಿಟಿ ಕೊಡಿ’ – ಮೋಹನ್ ಭಾಗವತ್‌ಗೆ ಪ್ರಿಯಾಂಕ್ ಖರ್ಗೆ ಪತ್ರ!!

‘RSS ನೋಂದಣಿ ಬಗ್ಗೆ ಕ್ಲಾರಿಟಿ ಕೊಡಿ’ – ಮೋಹನ್ ಭಾಗವತ್‌ಗೆ ಪ್ರಿಯಾಂಕ್ ಖರ್ಗೆ ಪತ್ರ!!

0 comments

ರಾಜ್ಯದಲ್ಲಿ RSS ಮತ್ತು ಕಾಂಗ್ರೆಸ್ ನಡುವಿನ ಜಟಾಪಟಿ ಕೊಂಚಮಟ್ಟಿಗೆ ಕಡಿಮೆಯಾಗಿದ್ದರೂ ಕೂಡ ಇದೀಗ ಹೊಸದಾಗಿ ಡಿಕೆ ಶಿವಕುಮಾರ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಮತ್ತೆ ಅದರ ಮೂಲವನ್ನು ಕೆದಕುವ, ನೋಂದಣಿಯನ್ನು ಹುಡುಕುವ ಪ್ರಯತ್ನ ಜೋರಾಗಿದೆ. ಅದರಲ್ಲೂ ನೂತನ ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರು RSS ಅನ್ನು  ತೀವ್ರವಾಗಿ ನಿಂದಿಸುತ್ತಾ, ಬಹಿರಂಗವಾಗಿ ಹಲವು ಮಾಹಿತಿಗಳನ್ನು ಕೇಳುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿ ಆಗಿದ್ದಾಗಲೂ ಅವರು RSS ನೊಂದಣಿ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಎತ್ತಿ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ‘ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು’ ಎನ್ನುವಂತೆ ಅವರಿಗೆ ಗೃಹ ಖಾತೆಯನ್ನು ನೀಡಲಾಗಿದ್ದು, ತಮ್ಮ ಅಧಿಕಾರವನ್ನು ಬಳಸಿಕೊಂಡು ತಾನು ಇದನ್ನು ಎಂದಿಗೂ ಬಿಡಲಾರೆ ಎಂಬುವಂತೆ ಮತ್ತೆ ಆರ್‌ಎಸ್‌ಎಸ್‌ ನೋಂದಣಿಯ ಬಗ್ಗೆ ಕ್ಲಾರಿಟಿ ಕೋರಿ ರಾಷ್ಟ್ರೀಯ ಸ್ವಯಂಸೇವಾ ಸಂಘದ ಸರ ಸಂಚಾಲಕ ಮೋಹನ್ ಭಾಗವತ್ ಅವರಿಗೆ ಪತ್ರವನ್ನೇ ಬರೆದುಬಿಟ್ಟಿದ್ದಾರೆ. 

ಯಸ್, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಹಿರಂಗ ಪತ್ರವನ್ನು ಬರೆದಿದ್ದು, ಪತ್ರದಲ್ಲಿ ಮಹತ್ವದ ಸಂಗತಿಗಳನ್ನು ಉಲ್ಲೇಖ ಮಾಡಿ,  100 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅಲ್ಲದೆ ಸಂಘಟನೆಯ ಕಾನೂನುಬದ್ಧ ಸ್ಥಾನಮಾನದ ಕುರಿತು ಸ್ಪಷ್ಟನೆ ಕೋರಿದ್ದಾರೆ.

ಪತ್ರದಲ್ಲಿ ಏನಿದೆ?

ಆರ್‌ಎಸ್‌ಎಸ್‌ನ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಅಖಿಲ ಭಾರತೀಯ ಪ್ರತಿನಿಧಿ ಸಭಾ (ABPS) ಬಿಡುಗಡೆ ಮಾಡಿದ 2025-26 ರ ವಾರ್ಷಿಕ ವರದಿಯ ಪ್ರಕಾರ, ಕರ್ನಾಟಕದಲ್ಲಿ 4,127 ದೈನಂದಿನ ಶಾಖೆಗಳು, 1,389 ಸಾಪ್ತಾಹಿಕ ಮಿಲನ್‌ಗಳು ಮತ್ತು 60 ಮಾಸಿಕ ಮಂಡಳಿಗಳನ್ನು ಹೊಂದುವ ಮೂಲಕ ಸಂಘಟನೆಯು ಭಾರಿ ಹೆಜ್ಜೆಗುರುತನ್ನು ಹೊಂದಿದೆ. 

banner

ಆರ್‌ಎಸ್‌ಎಸ್‌ನ ಸಾರ್ವಜನಿಕ ಒಗ್ಗೂಡುವಿಕೆ ಕೂಡ ಅಷ್ಟೇ ವಿಸ್ತಾರವಾಗಿದೆ. ನಿಮ್ಮ ವರದಿಯ ಪ್ರಕಾರ, ಸಂಘಟನೆಯು 2,194 ಸಮಾಜೋತ್ಸವಗಳನ್ನು ನಡೆಸಿದ್ದು, ಇದರಲ್ಲಿ 19,61,158 ಮಂದಿ ಭಾಗವಹಿಸಿದ್ದಾರೆ. ರಾಜ್ಯಾದ್ಯಂತ ನೀವು 562 ಪಥಸಂಚಲನಗಳನ್ನು ಆಯೋಜಿಸಿದ್ದೀರಿ, ಇವು ಸಾಮಾನ್ಯವಾಗಿ 2.5 ರಿಂದ 3 ಕಿ.ಮೀ.ವರೆಗೆ ನಡೆದಿದ್ದು, 2,21,963 ಸಮವಸ್ತ್ರಧಾರಿ ಸ್ವಯಂಸೇವಕರು ಪಾಲ್ಗೊಂಡಿದ್ದರು ಎಂದು ಹೇಳಿಕೊಂಡಿದ್ದೀರಿ.

ಇವೆಲ್ಲವನ್ನೂ ಒಟ್ಟಾಗಿ ನೋಡಿದಾಗ, ಕರ್ನಾಟಕದಾದ್ಯಂತ ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಸಂಪರ್ಕಗಳು, ಬೃಹತ್ ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಸಮವಸ್ತ್ರಧಾರಿ ಪಥಸಂಚಲನಗಳ ಮೂಲಕ ಕಾರ್ಯನಿರ್ವಹಿಸುತ್ತಿರುವ, ಶಿಸ್ತುಬದ್ಧ ಹಾಗೂ ಆಳವಾಗಿ ಬೇರೂರಿರುವ ಬೃಹತ್ ನೆಟ್‌ವರ್ಕ್ ಇದಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಇಷ್ಟೊಂದು ವಿಸ್ತಾರವಾದ ಸಾಂಸ್ಥಿಕ ಅಸ್ತಿತ್ವವನ್ನು ಹೊಂದಿರುವಾಗ, ವಿಶೇಷವಾಗಿ ನಿಯಮಿತವಾದ ಸಾರ್ವಜನಿಕ ಒಗ್ಗೂಡುವಿಕೆ, ಸಮವಸ್ತ್ರಧಾರಿ ಪಥಸಂಚಲನಗಳು ಮತ್ತು ದೊಡ್ಡ-ಮಟ್ಟದ ಸಾಮಾಜಿಕ ಕಾರ್ಯಕ್ರಮಗಳನ್ನು ಒಳಗೊಂಡಿರುವಾಗ, ಇದನ್ನು ಕೇವಲ ಒಂದು ಖಾಸಗಿ ಅಥವಾ ಅನೌಪಚಾರಿಕ (Informal) ವ್ಯವಸ್ಥೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇದು ಸಂಘಟನೆಯ ಕಾನೂನುಬದ್ಧ ಸ್ಥಾನಮಾನ, ಹೊಣೆಗಾರಿಕೆ, ಆರ್ಥಿಕ ಪಾರದರ್ಶಕತೆ, ಸಾರ್ವಜನಿಕ ಸುವ್ಯವಸ್ಥೆ, ಅನುಮತಿಗಳು, ಹಣಕಾಸಿನ ಮೂಲಗಳು ಮತ್ತು ಭಾರತದ ಸಂವಿಧಾನ ಹಾಗೂ ಕಾನೂನುಗಳ ಪಾಲನೆಯ ಕುರಿತು ನ್ಯಾಯಸಮ್ಮತವಾದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಆದ್ದರಿಂದ, ಇಷ್ಟೊಂದು ಬೃಹತ್ ಗಾತ್ರದ ಸಂಘಟನೆಯು ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಅಧಿಕೃತವಾಗಿ ಕಾನೂನುಬದ್ಧ ಘಟಕವಾಗಿ ಅಥವಾ ವ್ಯಕ್ತಿಗಳ ಸಂಸ್ಥೆ ಯಾಗಿ ನೋಂದಾಯಿಸಿಕೊಳ್ಳದೆ, ಅನಾಮಧೇಯವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತಿರುವ ಹಿಂದಿನ ‘ಕಾನೂನು ಆಧಾರಗಳನ್ನು’ ವಿವರಿಸಲು ನಿಮ್ಮ ಅಧಿಕೃತ ಪದಾಧಿಕಾರಿಗಳನ್ನು ನಿಯೋಜಿಸುವಂತೆ ನಾವು ಆರ್‌ಎಸ್‌ಎಸ್‌ ಅನ್ನು ಕೋರುತ್ತೇವೆ.

ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಯಾವುದೇ ಸಂಘಟನೆಯು ಎಷ್ಟೇ ಹಳೆಯದಾಗಿರಲಿ, ದೊಡ್ಡದಾಗಿರಲಿ ಅಥವಾ ಪ್ರಭಾವಶಾಲಿಯಾಗಿರಲಿ, ಅದು ಪರಿಶೀಲನೆಯಿಂದ (Scrutiny) ಹೊರತಾಗಿರಲು ಸಾಧ್ಯವಿಲ್ಲ. ಸಾರ್ವಜನಿಕ ಜೀವನದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ನಾಗರಿಕ, ಸಂಘ, ಸಂಸ್ಥೆ ಮತ್ತು ಮಂಡಳಿಯು ಕಾನೂನಿಗೆ ಬದ್ಧವಾಗಿರಬೇಕು ಎಂದು ನಿರೀಕ್ಷಿಸಲಾಗುತ್ತದೆ.

ಭಾರತದಲ್ಲಿ, ಓರ್ವ ಸಫಾಯಿ ಕರ್ಮಚಾರಿ ಕೂಡ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಪ್ರತಿಯೊಂದು ಧಾರ್ಮಿಕ ಸಂಸ್ಥೆ ಮತ್ತು ಧಾರ್ಮಿಕ ಟ್ರಸ್ಟ್‌ಗಳನ್ನು ಆಡಿಟ್ (ಲೆಕ್ಕಪರಿಶೋಧನೆ) ಮಾಡಲಾಗುತ್ತದೆ. ದತ್ತಿ ಸಂಸ್ಥೆಗಳು, ಎನ್‌ಜಿಒಗಳು, ಟ್ರಸ್ಟ್‌ಗಳು, ಸೊಸೈಟಿಗಳು, ಕಂಪನಿಗಳು ಮತ್ತು ಇತರ ಸಂಸ್ಥೆಗಳು ತಮ್ಮ ರಚನೆ, ಚಟುವಟಿಕೆಗಳು, ಹಣಕಾಸು ಮತ್ತು ಆದಾಯದ ಮೂಲಗಳನ್ನು ಬಹಿರಂಗಪಡಿಸಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ, ಆರ್‌ಎಸ್‌ಎಸ್ ಕೂಡ ಮುಂದೆ ಬಂದು ಈ ಕೆಳಗಿನ ಮಾಹಿತಿಗಳನ್ನು ಸಾರ್ವಜನಿಕರ ಮುಂದಿಡುವುದು (Public domain) ನ್ಯಾಯಯುತ ಹಾಗೂ ಅವಶ್ಯಕವಾಗಿದೆ. ಅದರ ಕಾನೂನುಬದ್ಧ ಸ್ಥಾನಮಾನ ಮತ್ತು ಸಾಂಸ್ಥಿಕ ರಚನೆ. ಅದರ ಪದಾಧಿಕಾರಿಗಳು ಮತ್ತು ಅಧಿಕೃತ ಪ್ರತಿನಿಧಿಗಳ ವಿವರಗಳು. ದೇಣಿಗೆ, ವಂತಿಗೆ ಮತ್ತು ಆದಾಯದ ಮೂಲಗಳು. ವೆಚ್ಚ ಮತ್ತು ಆಸ್ತಿಪಾಸ್ತಿಗಳ ವಿವರಗಳು. ಕಾನೂನಿನ ಪ್ರಕಾರ ಅನ್ವಯವಾಗುವ ತೆರಿಗೆಗಳನ್ನು ಪಾವತಿಸಲಾಗುತ್ತಿದೆಯೇ? ಅಧಿಕೃತ ನೋಂದಣಿಯಿಲ್ಲದೆ ಸಂಘಟನೆಯ ಚಟುವಟಿಕೆಗಳನ್ನು ನಡೆಸುತ್ತಿರುವ ಕಾನೂನು ಆಧಾರಗಳೇನು? ಎಂಬುವುದರ ಮಾಹಿತಿ ನಿಯೋಜಿಸುವಂತೆ ನಾವು ಆರ್‌ಎಸ್‌ಎಸ್‌ ಅನ್ನು ಕೋರುತ್ತೇವೆ ಎಂದು ಬರೆದಿದ್ದಾರೆ.

You may also like