HomeBreaking Entertainment News KannadaKantara : ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಅಭಿಮಾನಿಗಳಿಂದ ಹೊಸ ಬಿರುದು | ಕಾಂತಾರ ನಟ...

Kantara : ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಅಭಿಮಾನಿಗಳಿಂದ ಹೊಸ ಬಿರುದು | ಕಾಂತಾರ ನಟ ಒಪ್ಕೋಬಹುದಾ?

Hindu neighbor gifts plot of land

Hindu neighbour gifts land to Muslim journalist

ಕರಾವಳಿಯ ಪ್ರತಿಭೆ ರಿಷಭ್ ಶೆಟ್ಟಿ ಕಾಂತಾರ ಸಿನಿಮಾದ ಮೂಲಕ ಜನಪ್ರಿಯರಾಗಿದ್ದು, ಈ ಸಿನಿಮಾ ತನ್ನ ನಿರೀಕ್ಷೆಗೂ ಮೀರಿದ ಅಭಿಮಾನಿಗಳನ್ನು ಹೊಂದಿದ್ದು, ಎಲ್ಲೆಡೆಯೂ ತನ್ನದೇ ಟ್ರೆಂಡ್ ಸೃಷ್ಟಿ ಮಾಡಿದೆ. ಬಾಕ್ಸಾಫೀಸ್‌ನಲ್ಲಿ ‘ಕಾಂತಾರ’ ಸಿನಿಮಾ ನಾಗಾಲೋಟ ಮುಂದುವರೆದಿದ್ದು, ಈಗಾಗಲೇ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಇತಿಹಾಸ ಸೃಷ್ಟಿಸಿದೆ.

ಹಿಂದಿ, ತೆಲುಗು, ತಮಿಳಿಗೂ ಡಬ್ ಆಗಿ ಸೂಪರ್ ಹಿಟ್ ಆಗಿದ್ದು, ಹೊರ ರಾಜ್ಯಗಳಲ್ಲಿ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಕ್ಲೈಮ್ಯಾಕ್ಸ್‌ನಲ್ಲಿ ಪಂಜುರ್ಲಿ ಹಾಗೂ ಗುಳಿಗ ದೈವಗಳು ಮೈ ಮೇಲೆ ಆವಾಹನೆಯಾದಂತೆ ರಿಷಬ್ ಶೆಟ್ಟಿ ನಟಿಸಿದ್ದರೆ, ಅವರ ಅಮೋಘ ಅಭಿನಯಕ್ಕೆ ಕೆಲವರು ದೇವರನ್ನೇ ಕಂಡಂತೆ ಕೈ ಮುಗಿಯುತ್ತಿದ್ದಾರೆ.

ತಮ್ಮ ಅದ್ಭುತ ಅಭಿನಯದಿಂದ ರಿಷಬ್ ಶೆಟ್ಟಿ ಎಲ್ಲರಿಗೂ ಮೋಡಿ ಮಾಡಿದ್ದಾರೆ. ಕರ್ನಾಟಕದಲ್ಲಿ ಸಿನಿ ಪ್ರೇಕ್ಷಕರು ಮಾತ್ರವಲ್ಲದೇ ಬಾಲಿವುಡ್ , ಟಾಲಿ ವುಡ್ ಹಾಗೂ ಪರ ಭಾಷೆಯ ಸೆಲೆಬ್ರಿಟಿಗಳು ಸಹ ಕಾಂತಾರ ಚಿತ್ರವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿ ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಗೆ ಫುಲ್ ಫಿದಾ ಆಗಿಬಿಟ್ಟಿದ್ದಾರೆ.

ಕರಾವಳಿಯ ಕಲೆಯನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸಿರುವ ಅದ್ಭುತ ಕಲಾವಿದ ಹಾಗೂ ಬಹುಮುಖ ಪ್ರತಿಭೆ ರಿಷಬ್ ಶೆಟ್ಟಿಯ ಪಾತ್ರ ಹಾಗೂ ನಿರ್ದೇಶನ ಶ್ಲಾಘನೀಯ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಿಧನದ ಸುದ್ದಿಯ ಬಳಿಕ ಕವಿದಿದ್ದ ಕಾರ್ಮೋಡ ಕೊಂಚ ಮಟ್ಟಿಗಾದರೂ ತಿಳಿಯಾದರು ಕೂಡ ನೋವಿನ ಛಾಯೆ ಮರೆಮಾಸದು.

ಈ ನಡುವೆ ಬಹುಮುಖ ಪ್ರತಿಭೆ ಕಾಂತಾರ’ ಸಿನಿಮಾ ಮೂಲಕ ಅಬ್ಬರಿಸಿದ ರಿಷಬ್ ಶೆಟ್ಟಿ ರಾತ್ರೋರಾತ್ರಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿಬಿಟ್ಟಿದ್ದಾರೆ. ಕನ್ನಡ ಸಿನಿರಸಿಕರಂತೂ ಮತ್ತೊಬ್ಬ ಸೂಪರ್ ಸ್ಟಾರ್ ಹುಟ್ಟಿಕೊಂಡಿದ್ದಾರೆ ಎಂದು ಮಾತನಾಡುತ್ತಿದ್ದು, ರಿಷಬ್ ಶೆಟ್ಟಿಗೆ ಹೊಸಬಿರುದು ನೀಡುವ ಕುರಿತು ದೊಡ್ದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.

ನಟಸಾರ್ವಭೌಮ ಡಾ. ರಾಜ್‌ಕುಮಾರ್, ಸಾಹಸಿಂಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ರಾಕಿಂಗ್ ಸ್ಟಾರ್ ಯಶ್, ಗೋಲ್ಡನ್ ಸ್ಟಾರ್ ಗಣೇಶ್ ಹೀಗೆ ಕನ್ನಡದ ಎಲ್ಲಾ ಸ್ಟಾರ್ ನಟರಿಗೂ ಒಂದೊಂದು ಬಿರುದನ್ನು ಅಭಿಮಾನಿಗಳು ಕೊಟ್ಟಿದ್ದಾರೆ. ನಟರನ್ನು ತಮ್ಮ ಪ್ರೀತಿ ಹಾಗೂ ಅಭಿಮಾನದ ಸಂಕೇತವಾಗಿ ಹೆಸರಿನ ಜೊತೆಗೆ ಬಿರುದುಗಳನ್ನು ಸೇರಿಸಿ ಕರೆದು ಜೈಕಾರ ಹಾಕುವ ವಾಡಿಕೆ ಮುಂಚಿನಿಂದಲೂ ಇದೆ.

ಮೊದಲೆರಡು ಸಿನಿಮಾಗಳಲ್ಲಿ ರಿಷಬ್ ಶೆಟ್ಟಿ ಹೀರೊ ಆಗಿ ಗೆದ್ದರೂ ಕೂಡ ‘ಕಾಂತಾರ’ ಚಿತ್ರದ ಮೂಲಕ ಸಿನಿ ರಸಿಕರ ಮನೆ ಮಾತಾಗಿದ್ದು, ಹಾಗಾಗಿ ಅಭಿಮಾನಿಗಳು ನೆಚ್ಚಿನ ನಟನನ್ನು ಹೊಸ ಬಿರುದಿನಿಂದ ಕರೆಯಲು ಮನಸ್ಸು ಮಾಡಿದ್ದಾರೆ.

ಕಾಂತಾರ ಸಿನೆಮಾದ ಬಗ್ಗೆ ಮೆಚ್ಚುಗೆಯ ಸುರಿಮಳೆಗಳು ಎಲ್ಲೆಡೆಯೂ ಹರಡುತ್ತಿದೆ. ಹಾಗಾಗಿ ನಟನೆಯ ಮೂಲಕ ಜಾದೂ ಮೂಡಿಸಿರುವ ನಟನಿಗೆ ‘ಡಿವೈನ್ ಸ್ಟಾರ್’ ಎನ್ನುವ ಬಿರುದು ಅವರಿಗೆ ಸೂಕ್ತ ಎನ್ನುವುದು ಕೆಲ ಅಭಿಮಾನಿಗಳ ಆಸೆಯಾಗಿದೆ. ‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ ಎಂದು ಕರೆದು ಅಭಿಮಾನಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕೆಲವರು ಇದಕ್ಕೆ ಒಳ್ಳೆ ಬಿರುದು ಎಂದಿದ್ದರೆ, ಇನ್ನು ಕೆಲವರು ನ್ಯಾಚುರಲ್ ಸ್ಟಾರ್ ರಿಷಬ್ ಶೆಟ್ಟಿ ಎನ್ನುತ್ತಿದ್ದು, ಮತ್ತೊಬ್ಬರು ‘ಕರಾವಳಿ ಚಕ್ರವರ್ತಿ’ ಎಂದು ಕಾಮೆಂಟ್ ಮಾಡಿದ್ದಾರೆ.

ಹೀಗೆ ಕರಾವಳಿಯ ಕಲಾವಿದನಿಗೆ ಬಿರುದು ನೀಡಲು ಸಿನಿ ರಸಿಕರು ಮುಂದಾಗಿದ್ದು, ‘ಕಾಂತಾರ’ ಅಷ್ಟರಮಟ್ಟಿಗೆ ಸಿನಿರಸಿಕರ ಮೇಲೆ ಪ್ರಭಾವ ಬೀರಿದೆ. ಕೇವಲ ಒಂದೇ ಸಿನಿಮಾದಿಂದ ರಿಷಬ್ ಶೆಟ್ಟಿ ಸ್ಟಾರ್‌ ಪಟ್ಟಕ್ಕೇರಿಬಿಟ್ಟಿದ್ದಾರೆ.

ಬಹುಮುಖ ಪ್ರತಿಭೆ ರಿಷಬ್ ನಿರ್ದೇಶನದ ಜೊತೆಗೆ ಹೀರೊ ಆಗಿಯೂ ಗೆದ್ದಿದ್ದು, ಇತ್ತೀಚೆಗೆ ‘ಕಾಂತಾರ’ ಸಿನಿಮಾ ನೋಡಿದ್ದ ಮೆಚ್ಚಿಕೊಂಡಿದ್ದ ನಿರ್ದೇಶಕ ಪ್ರಶಾಂತ್ ನೀಲ್ ಡಿವೈನ್ ರಿಷಬ್ ಶೆಟ್ಟಿ ಎಂದು ಕರೆದು ಪೋಸ್ಟ್ ಮಾಡಿದ್ದರು.ಡಿವೈನ್ ಸ್ಟಾರ್’ ಅಲ್ಲದೇ ಇದ್ದರೂ ಯಾವುದಾದರೂ ಒಂದು ಬಿರುದನ್ನು ಶೀಘ್ರದಲ್ಲೇ ಅಭಿಮಾನಿಗಳು ರಿಷಬ್ ಶೆಟ್ಟಿಗೆ ನೀಡುವುದಂತು ಗ್ಯಾರಂಟಿ.

RELATED ARTICLES

Most Popular

Recent Comments