ಪುತ್ತೂರು ಮಾ.17: ಪುತ್ತೂರಿನ ನೆಲ್ಲಿಕಟ್ಟೆಯಲ್ಲಿ ಕಳೆದ ತಿಂಗಳು ಲೋಕಾಪರ್ಣೆಯಾಗಿದ್ದ ರಾಜ್ಯದ ಮೂರನೇ ಅತೀ ಎತ್ತರ ಧ್ವಜಸ್ತಂಭದಲ್ಲಿ ಅಳವಡಿಸಲಾಗಿದ್ದ ರಾಷ್ಟ್ರಧ್ವಜ ನಿನ್ನೆ ಸುರಿದ ಗಾಳಿ, ಮಳೆಗೆ (ಮಾ.16) ಸಿಲುಕಿ ದಾರ ಕಡಿದು ಕೆಳಗಿದ್ದ ವಿದ್ಯುತ್ ತಂತಿ ಮೇಲೆ ಬಿದ್ದಿರುವ ಘಟನೆ ನಡೆದಿದೆ. ಇದರಿಂದ ಕೆಲಕಾಲ ಅಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.

ಪುತ್ತೂರಿನ್ಲಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದ 264 ಅಡಿ ಎತ್ತರದ ಧ್ವಜಸ್ತಂಭ ಹಾರಾಡುತ್ತಿದ್ದು, ಭಾರೀ ಗಾಳಿಗೆ ದಾರ ಕಡಿದು ಕೆಳಗೆ ಬಿದ್ದಿದೆ. ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ಮೆಸ್ಕಾಂ ಇಲಾಖೆಯ ಸಿಬ್ಬಂದಿ, ಆ ಪ್ರದೇಶದ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿದರು. ನಂತರ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದು, ಕೆಳಗೆ ಬಿದ್ದಿದ್ದ ರಾಷ್ಟ್ರಧ್ವಜವನ್ನು ಗೌರವಪೂರ್ವಕವಾಗಿ ಕೆಳಗಿಳಿಸಿದರು. ಭಾರೀ ಮಳೆಯಿಂದ ಧ್ವಜ ಸಂಪೂರ್ಣವಾಗಿ ಒದ್ದೆಯಾಗಿದ್ದು, ಭಾರೀ ಗಾಳಿಯಿಂದ ಈ ರೀತಿಯಾಗಿದ್ದಾಗಿ ಹೇಳಲಾಗುತ್ತಿದೆ.
ಪುತ್ತೂರು ನಗರಾಭಿವೃದ್ಧೀ ಪಾಧಿಕಾರದ (ಪುಡಾ) ಸದಸ್ಯ ನಿಹಾಲ್ ಶೆಟ್ಟಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

