

Mangaluru: ಮಂಗಳೂರಿನ ವ್ಯಕ್ತಿ ಒಬ್ಬರಿಗೆ ಮುಂಬೈ ಸಿಸಿಬಿ ಪೊಲೀಸ್ ಎಂದು ಹೇಳಿ ಡಿಜಿಟಲ್ ಅರೆಸ್ಟ್ ಮಾಡಿ ಬರೋಬ್ಬರಿ 41 ಲಕ್ಷಹಣವನ್ನು ವಸೂಲಿ ಮಾಡಿದ ಘಟನೆ ನಡೆದಿದೆ. ಮಂಗಳೂರು ಸೆನ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಏನಿದು ಘಟನೆ?
ದಿನಾಂಕ 31-01-2026 ರಂದು ಯಾರೋ ಅಪರಿಚಿತ ವ್ಯಕ್ತಿ ದೆಹಲಿಯಿಂದ 8796142545 ಈ ನಂಬರ್ ನಿಂದ ಕರೆ ಮಾಡಿ ಮುಂಬೈ ಸಿಸಿಬಿ ಪೊಲೀಸ್ ಎಂದು ಪರಿಚಯಿಸಿಕೊಂಡಿದ್ದಾರೆ. ಈ ವೇಳೆ ವ್ಯಕ್ತಿಗೆ ನಿಮ್ಮ ಗುರುತಿನ ಚೀಟಿ ಬಳಸಿಕೊಂಡು ಮುಂಬೈನಲ್ಲಿ ಕೆನರಾ ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆದಿದ್ದು ಅದರಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆಯುತ್ತಿದ್ದು ಈ ಹಿನ್ನಲೆ ನಿಮ್ಮನ್ನ ಅರೆಸ್ಟ್ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ. ಬಳಿಕ ದೂರುದಾರ ನನ್ನು ಡಿಜಿಟಲ್ ಅರೆಸ್ಟ್ ಮಾಡಿದಲ್ಲದೆ ಅರೆಸ್ಟ್ ಮಾಡಲು ಸುಪ್ರಿಂ ಕೋರ್ಟ್ ವಾರೆಂಟ್ ಆಗಿದ್ದು, ಬಂಧಿಸಲು ಅರೆಸ್ಟ್ ವಾರೆಂಟ್ ಕೂಡ ಹೊರಡಿಸಿರುವುದಾಗಿ ತಿಳಿಸಿರುತ್ತಾರೆ.
ನಂತರ ವಾಟ್ಸ್ ಆಯಫ್ ಮೂಲಕ ವಿಡಿಯೋ ಕಾಲ್ ನಲ್ಲಿ ಇದ್ದು ತನಿಖೆಗೆ ಸಹಕರಿಸಬೇಕಾಗಿ ತಿಳಿಸಿ ಇಲ್ಲವಾದಲ್ಲಿ ಕೂಡಲೇ ಬಂಧಿಸುವುದಾಗಿ, ಈ ವಿಚಾರವನ್ನು ಮಗ ಹಾಗೂ ಹಾಗೂ ಹೆಂಡತಿಗೆ ಸಹ ತಿಳಿಸಿದಂತೆ ಹೆದರಿಸಿರುತ್ತಾರೆ. ನಂತರ ಸಂತ್ರಸ್ತ ವ್ಯಕ್ತಿಯ ಎಲ್ಲಾ ವೈಯಕ್ತಿಕ ವಿವರಗಳು ಮತ್ತು ಬ್ಯಾಂಕಿನ ವಿವರಗಳನ್ನು ಪಡೆದುಕೊಂಡಿರುತ್ತಾರೆ. ಈ ರೀತಿಯಾಗಿ ಪಿರ್ಯಾದಿದಾರರಿಗೆ ಆನ್ ಲೈನ್ ಮೂಲಕ ಡಿಜಿಟಲ್ ಅರೆಸ್ಟ್ ಮಾಡಿ ನಿರಂತರವಾಗಿ ವಿವಿಧ ರೀತಿಯಾಗಿ ವಿಚಾರಣೆ ಮಾಡಿ ಪರಿಶೀಲನೆ ಮುಗಿಯುವವರೆಗೂ ವರ್ಗಾಯಿಸುವಂತೆ ಹಾಗೂ ಪಾವತಿಸಿದ ಎಲ್ಲಾ ಹಣವನ್ನು ವಾಪಾಸು ನೀಡುವಂತೆ ತಿಳಿಸಿರುತ್ತಾರೆ.
ಇದರಿಂದ ಭಯಗೊಂಡ ದೂರುದಾರ ಆರೋಪಿಗಳು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ದಿನಾಂಕ 09-02-2026 ರಿಂದ 18-02-2026 ರವರೆಗೆ ಒಟ್ಟು ರೂ 41,85,000/- ಹಣವನ್ನು RTGS & NEFT ಮುಖೇನಾ ಹಣ ವರ್ಗಾವಣೆ ಮಾಡಿರುತ್ತಾರೆ. ಇದೀಗ ಹಣ ಕಳೆದುಕೊಂಡ ಬಳಿಕ ಪೊಲೀಸ್ ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದಾರೆ.
