Home » Fire Accident: ಕೊಂಡ ಹಾಯುವಾಗ ಮುಗ್ಗರಿಸಿ ಬಿದ್ದ ವೀರಗಾಸೆ ಪೂಜಾರಿ; ದೇವರ ಹೊತ್ತ ಅರ್ಚಕ ಜಸ್ಟ್‌ ಮಿಸ್‌

Fire Accident: ಕೊಂಡ ಹಾಯುವಾಗ ಮುಗ್ಗರಿಸಿ ಬಿದ್ದ ವೀರಗಾಸೆ ಪೂಜಾರಿ; ದೇವರ ಹೊತ್ತ ಅರ್ಚಕ ಜಸ್ಟ್‌ ಮಿಸ್‌

0 comments
Fire Accident

Mandya Fire Accident: ಬಸವೇಶ್ವರ ಕೊಂಡೋತ್ಸವದ ಸಂದರ್ಭದಲ್ಲಿ ಕೊಂಡ ಹಾಯುವ ವೇಳೆ ವೀರಗಾಸೆ ಪೂಜಾರಿಯೊಬ್ಬರು ಎಡವಿದ ಘಟನೆಯೊಂದು ನಡೆದಿದೆ. ಕೊಂಡ ಹಾಯುವ ವೇಳೆ ಬಿದ್ದು, ಮೈ ಕೈ ಸುಟ್ಟುಕೊಂಡಿದ್ದಾರೆ. ಈ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಳಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: Bridge Collapse: ನಿರ್ಮಾಣ ಹಂತದ ಸೇತುವೆ ಕುಸಿತ : 1 ಸಾವು, 9 ಮಂದಿಗೆ ಗಂಭೀರ ಗಾಯ

ಬಸವೇಶ್ವರ ಜಾತ್ರಾಮಹೋತ್ಸವ ಅಗ್ನಿ ಕೊಂಡೋತ್ಸವದಲ್ಲಿ ಹುಳಗನಹಳ್ಳಿ ಗ್ರಾಮದಲ್ಲಿ ನಡೆಯುತ್ತಿತ್ತು. ಈ ವೇಳೆ ಕೊಂಡ ಹಾಯಲು ಓಡಿ ಬರುವಾಗ ವೀರಗಾಸೆ ಪೂಜಾರಿ ಮುಗ್ಗರಿಸಿ ಬಿದ್ದಿದ್ದು, ಕೂಡಲೇ ಅಲ್ಲಿದ್ದವರು ಆತನನ್ನು ಬೆಂಕಿಯಿಂದ ಮೇಲಕ್ಕೆತ್ತಿದ್ದಾರೆ.

ಇದನ್ನೂ ಓದಿ: Mangaluru: ಹುಡುಕಿ ವಿಚಾರದಲ್ಲಿ ಕಾಲೇಜು ಹುಡುಗರ ಗಲಾಟೆ; ಯುವಕನಿಗೆ ಹಿಗ್ಗಾಮುಗ್ಗ ಹಲ್ಲೆಗೈದ ಲವ್ವರ್‌; ವೀಡಿಯೋ ವೈರಲ್

banner

ಆದರೆ ಅನಂತರ ದೇವರನ್ನು ಹೊತ್ತುಕೊಂಡು ಕೊಂಡ ಹಾಯಲು ಪೂಜಾರಿ ಮುಂದಾಗಿದ್ದು, ಆತನೂ ಕೊಂಡಕ್ಕೆ ಬೀಳುವಾಗ ಕೈಯಲ್ಲಿದ್ದ ದೇವರನ್ನೇ ಬಿಟ್ಟು ಪಾರಾಗಿರುವ ಘಟನೆ ನಡೆದಿದೆ. ವಿರಗಾಸೆ ಪೂಜಾರಿಯನ್ನು ಮಂಡ್ಯ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

You may also like

Leave a Comment