ಭಾವೀ ಸಿಎಂ ಡಿಕೆ ಶಿವಕುಮಾರ್ ಕುರಿತು ಜ್ಯೋತಿಷಿ ರಾಜಗುರು ದ್ವಾರಕಾನಾಥ್ ಗುರೂಜಿ ಭವಿಷ್ಯ ನುಡಿದಿದ್ದಾರೆ. ಜೂನ್ 4 ಮತ್ತು ಜೂನ್ 5 ರಂದು ಪ್ರಮಾಣವಚನ ಸ್ವೀಕರಿಸುವ ದಿನಾಂಕಗಳನ್ನು ಅವರಿಗೆ ನೀಡಿರುವುದಾಗಿ ಅವರು ಮಾಧ್ಯಮವೊಂದಕ್ಕೆ ಹೇಳಿದ್ದಾರೆ. ಇನ್ನು ಡಿಕೆ ಶಿವಕುಮಾರ್ ದೀರ್ಘಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಾರೆ ಎಂದು ರಾಜಗುರು ದ್ವಾರಕನಾಥ್ ಭವಿಷ್ಯ ನುಡಿದಿದ್ದಾರೆ.


ನನಗೆ ಕರೆ ಮಾಡಿದಾಗ ನಾನು ಶೃಂಗೇರಿಯಲ್ಲಿದ್ದೆ. ಅವರಿಗಾಗಿ ಪ್ರಾರ್ಥನೆ ಮಾಡುತ್ತಿದ್ದೆ. ಸಚಿವರಾಗುವ ಮೊದಲೇ ನಾನು ಡಿಕೆಶಿ ಅವರಿಗೆ ನಾನು ಅವರಿಗೆ ಒಂದು ದಿನ ಸಿಎಂ ಆಗುತ್ತಾರೆ ಎಂದು ಹೇಳಿದ್ದೆ. ಇದೀಗ ಅವರು ಸಿಎಂ ಆಗುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
