Home latest ಬೆಳ್ತಂಗಡಿ:ಉಜಿರೆಯ ಮನೆಯೊಂದರ ಹಂಚು ತೆಗೆದು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯ ಬಂಧನ

ಬೆಳ್ತಂಗಡಿ:ಉಜಿರೆಯ ಮನೆಯೊಂದರ ಹಂಚು ತೆಗೆದು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯ ಬಂಧನ

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ: ಉಜಿರೆ ಗ್ರಾಮದ ಕಕ್ಕೆಜಾಲು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಹಂಚು ತೆಗೆದು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು
ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಉಜಿರೆ ಗ್ರಾಮದ ಕಕ್ಕೆಜಾಲು ನಿವಾಸಿ ಸುಲೈಮಾನ್ ಎಂಬವರ ಮನೆಯಲ್ಲಿ ಕಳವುಗೈದಿದ್ದು, ಮುಂಡಾಜೆ ಗ್ರಾಮದ ಚಿನ್ನಿಗುಡ್ಡೆ ನಿವಾಸಿ ಇಂತಿಯಾಜ್(37) ಎಂಬವನನ್ನು ವಶಕ್ಕೆ ಪಡೆಯಲಾಗಿದೆ.

ಸುಲೈಮಾನ್ ಮತ್ತು ಮನೆಯವರು ಭದ್ರಾವತಿಗೆ ತೆರಳಿದ್ದ ಸಂದರ್ಭದಲ್ಲಿ ಆರೋಪಿ ಇಂತಿಯಾಜ್ ಮನೆಯ ಹಂಚನ್ನು ತೆಗೆದು ಗೋಡೇಜ್ ನಲ್ಲಿದ್ದ 60,000 ರೂ. ನಗದು, 1 ಗ್ರಾಂ ತೂಕದ 1 ಜೊತೆ ಕಿವಿಯೋಲೆ, 2, ಗ್ರಾಂ ತೂಕದ ಎರಡು ಉಂಗುರಗಳು, ನೋಕಿಯಾ ಮೊಬೈಲ್, ಹಾಗೂ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಆಕ್ಟಿವಾ 6ಜಿ ಸಮೇತ 1,35,100 ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದಿದ್ದಾನೆ ಎಂದು ದೂರಿನಲ್ಲಿ
ತಿಳಿಸಿದ್ದಾರೆ.

ಈ ಬಗ್ಗೆ ಠಾಣೆಯಲ್ಲಿ ಅಕ್ರ:07/2022 ಕಲಂ: 454, 457, 380, 379 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಹಾಗೂ ಆರೋಪಿಯಿಂದ 3,500 ರೂ., ಒಂದು ಜೊತೆ ಕಿವಿಯೋಲೆ, 2 ಸಣ್ಣ ಉಂಗುರ ಹಾಗೂ ಆಕ್ಟಿವಾವನ್ನು
ಸ್ವಾಧೀನ ಪಡಿಸಿದ್ದು, ಸ್ವಾಧೀನ ಪಡಿಸಿದ ಸೊತ್ತುಗಳ ಮೌಲ್ಯ 78,000 ರೂ. ಆಗಿರುತ್ತದೆ ಎಂದು ತಿಳಿದು ಬಂದಿದೆ.