Home » ಬೆಳ್ತಂಗಡಿ:ಬಾವಿಕಟ್ಟೆಯ ಮೇಲೆ ಕುಳಿತುಕೊಂಡಿದ್ದ ವ್ಯಕ್ತಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವು!

ಬೆಳ್ತಂಗಡಿ:ಬಾವಿಕಟ್ಟೆಯ ಮೇಲೆ ಕುಳಿತುಕೊಂಡಿದ್ದ ವ್ಯಕ್ತಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವು!

0 comments

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ:ಬಾವಿಕಟ್ಟೆಯಲ್ಲಿ ಕುಳಿತಿದ್ದ ವ್ಯಕ್ತಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಉಜಿರೆ ಗ್ರಾಮದ ಸದರ್ನ್ ರಬ್ಬರ್ ಅಂಗಡಿ ಬಳಿ ನಡೆದಿದೆ.

ಬಿಹಾರ ಮೂಲದ ಬದ್ಲುಸಿಂಗ್ (39) ಎಂಬುವವರು ಮೃತ ಪಟ್ಟವರೆಂದು ಗುರುತಿಸಲಾಗಿದೆ.

ಮೃತರು,ಪೈಸ್ ಮ್ಯಾಥ್ಯ ಎಂಬುವರ ಸದರ್ನ್ ರಬ್ಬರ್ ಅಂಗಡಿಯಲ್ಲಿ ರಬ್ಬರ್ ಪ್ಯಾಕಿಂಗ್ ಕೆಲಸ ಮಾಡುತ್ತಿದ್ದು,ಅಂಗಡಿಯ ಹಿಂಬದಿಯಲ್ಲಿರುವ ರೂಮಿನಲ್ಲಿ ನಂದಲಾಲ್ ಮತ್ತು ಶಿವಾನಂದ ಎಂಬವರೊಂದಿಗೆ ವಾಸವಾಗಿದ್ದರು.ವಿಪರೀತ ಅಮಲು ಪದಾರ್ಥ ಸೇವನೆ ಚಟ ಹೊಂದಿದ್ದ ಇವರು, ನಿನ್ನೆ ಮಧ್ಯಾಹ್ನ 12.30 ವೇಳೆಗೆ ತನ್ನ ರೂಮಿನ ಪಕ್ಕದಲ್ಲಿರುವ ಬಾವಿಕಟ್ಟೆಯ ಮೇಲೆ ಕುಳಿತುಕೊಂಡಿದ್ದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾನೆ.

ಈ ಬಗ್ಗೆ ಪ್ರೈಸ್ ಮ್ಯಾಥ್ಯ ಅವರು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

banner

You may also like

Leave a Comment