Home Jobs ಹಲ್ಲು ಓರೆಕೋರೆಯಾಗಿದೆ ಎಂಬ ಕಾರಣಕ್ಕೆ ಕೆಲಸ ನಿರಾಕರಿಸಿದ ಇಲಾಖೆ!!!

ಹಲ್ಲು ಓರೆಕೋರೆಯಾಗಿದೆ ಎಂಬ ಕಾರಣಕ್ಕೆ ಕೆಲಸ ನಿರಾಕರಿಸಿದ ಇಲಾಖೆ!!!

Hindu neighbor gifts plot of land

Hindu neighbour gifts land to Muslim journalist

ಹಲ್ಲುಗಳು ಓರೆ ಕೋರೆಯಾಗಿ ಮುಂದಕ್ಕೆ ಬಾಗಿವೆ ಎಂದು ಯುವಕನನ್ನು ಕೆಲಸಕ್ಕೆ ಸೇರಿಸಲು ನಿರಾಕರಿಸಿದ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಕೇರಳದ ಬುಡಕಟ್ಟು ಸಮುದಾಯದ ಜನರು ಕಡು ಬಡತನದ ನಡುವೆ ವಾಸಿಸುತ್ತಿದ್ದಾರೆ ಮತ್ತು ತಮ್ಮ ಜೀವನ ನಿರ್ವಹಣೆಗಾಗಿ ಅರಣ್ಯವನ್ನು ಹೆಚ್ಚು ಅವಲಂಬಿಸಿದ್ದಾರೆ. ಇತ್ತೀಚೆಗೆ ಕೇರಳ ಲೋಕಸೇವಾ ಆಯೋಗವು (ಪಿಎಸ್‌ಸಿ) ನಡೆಸಿದ ಬುಡಕಟ್ಟು ಸಮುದಾಯದ ಯುವಜನರಿಗೆ ವಿಶೇಷ ನಿಯಮದಡಿಯಲ್ಲಿ ಸರ್ಕಾರಿ ಹುದ್ದೆಯ ನೇಮಕಾತಿಗೆ ಪರೀಕ್ಷೆಗಳನ್ನು ಆಯೋಜಿಸಿತ್ತು.

ಇದರಲ್ಲಿ ಫಾರೆಸ್ಟ್ ಬೀಟ್ ಆಫೀಸರ್ ಹುದ್ದೆಗೆ ಅಟ್ಟಪಾಡಿಯ ಹಿಂದುಳಿದ ಬುಡಕಟ್ಟಿನ ಸದಸ್ಯ ಮುತ್ತು ಪರೀಕ್ಷೆ ಬರೆದು, ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಈ ಎರಡಲ್ಲೂ ತೇರ್ಗಡೆಯಾದ ಬಳಿಕ ಹುದ್ದೆಗಾಗಿ ಮುತ್ತು ಕಾಯುತ್ತಿದ್ದರು. ಸರ್ಕಾರಿ ಉದ್ಯೋಗ ಗಳಿಸುವ ತಮ್ಮ ಬಹುಕಾಲದ ಕನಸನ್ನು ನನಸಾಗಿಸುವ ಭರವಸೆಯಲ್ಲಿದ್ದರು.

ಆದರೆ, ಮುತ್ತು ಅವರಿಗೆ ಯಾವುದೇ ಸೂಚನೆ ಬರಲಿಲ್ಲ. ನಂತರ ಮುತ್ತು ಅಧಿಕಾರಿಗಳಲ್ಲಿ ವಿಚಾರಿಸಿದಾಗ, ಅಧಿಕಾರಿಗಳು ಕೇರಳ ಸಾರ್ವಜನಿಕ ಸೇವಾ ಆಯೋಗ ನಿಮ್ಮ ಹುದ್ದೆಯ ಅರ್ಜಿಯನ್ನು ತಿರಸ್ಕರಿಸಿದೆ. ಏಕೆಂದರೆ ನಿಮ್ಮ ಹಲ್ಲುಗಳು ಓರೆಕೋರೆಯಾಗಿ ಮುಂದೆ ಬಂದಿರುವುದರಿಂದ ನಿಮ್ಮ ಮೆಡಿಕಲ್ ಪ್ರಮಾಣ ಪತ್ರವೂ ತಿರಸ್ಕೃತಗೊಂಡಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಕೇರಳ ಎಸ್/ ಟಿ ಆಯೋಗ ಸುಮೋಟೋ ಪ್ರಕರಣವನ್ನು ದಾಖಲಿಸಿದೆ ಎಂದು ವರದಿ ತಿಳಿಸಿದೆ.

ಬಾಲ್ಯದಲ್ಲಿ ಆದ ಅವಘಡದಿಂದ ತನ್ನ ಹಲ್ಲು ಹೀಗೆ ಮುಂದಕ್ಕೆ ಬಂದಿದೆ. ಇದನ್ನು ಸರಿಪಡಿಸಲು 18,000 ಖರ್ಚು ಆಗುತ್ತದೆ. ಇಷ್ಟು ದೊಡ್ಡ ಮೊತ್ತವನ್ನು ನನ್ನ ಕುಟುಂಬ ಭರಿಸಲು ಸಾಧ್ಯವಿಲ್ಲ ಅದಕ್ಕೆ ಹೀಗೆಯೇ ಇದ್ದೇನೆ ಎಂದು ಮುತ್ತು ತನ್ನ ದುಃಖವನ್ನು ತೋಡಿಕೊಂಡಿದ್ದಾರೆ. ಈ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಕೊಲ್ಲಂ ಮೂಲದ ದಂತ ವೈದ್ಯ ಡಾ. ವಿಲ್ಸನ್ ಜಾನ್ ಎಂಬುವವರು ಮುತ್ತು ಅವರ ಹಲ್ಲುಗಳನ್ನು ತನ್ನ ಸ್ವಂತ ಖರ್ಚಿನಲ್ಲಿ ಸರಿಪಡಿಸುವುದಾಗಿ ಭರವಸೆ ನೀಡಿರುವುದಾಗಿ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.