Home Interesting ಭಾರತದ ಆಧಾರ್ ಸಂಸ್ಥೆ ‘UIDAI’ನಿಂದ ಮಹತ್ವದ ನಿರ್ಧಾರ | ಇನ್ಮುಂದೆ ಆಧಾರ್ ನವೀಕರಣಕ್ಕಾಗಿ ಯಾವುದೇ ಶುಲ್ಕ...

ಭಾರತದ ಆಧಾರ್ ಸಂಸ್ಥೆ ‘UIDAI’ನಿಂದ ಮಹತ್ವದ ನಿರ್ಧಾರ | ಇನ್ಮುಂದೆ ಆಧಾರ್ ನವೀಕರಣಕ್ಕಾಗಿ ಯಾವುದೇ ಶುಲ್ಕ ಪಾವತಿ ಅಗತ್ಯವಿಲ್ಲ!

Hindu neighbor gifts plot of land

Hindu neighbour gifts land to Muslim journalist

ಆಧಾರ್ ಕಾರ್ಡ್ ಎಂಬುದು ವ್ಯಕ್ತಿಯ ಗುರುತಾಗಿದ್ದು, ಇದು ಭಾರತದ ಪ್ರತಿಯೊಬ್ಬ ನಾಯಕನಿಗೂ ಕಡ್ಡಾಯವಾಗಿದೆ. ಸರ್ಕಾರಿ ಕೆಲಸದಿಂದ ಹಿಡಿದು ಬ್ಯಾಂಕ್ ವಹಿವಾಟುಗಳ ವರೆಗೂ ಇದರ ಕಾರ್ಯ ಮಹತ್ವದ್ದಾಗಿದೆ. ನಮ್ಮ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುತ್ತದೆ ಆಧಾರ್. ಸರ್ಕಾರಿ ಹಾಗೂ ಸರ್ಕಾರೇತರ ಸೌಲಭ್ಯ ಸೇರಿದಂತೆ ಬ್ಯಾಂಕ್ ಖಾತೆ ತೆರೆಯಲೂ ಸಹ ಆಧಾರ್ ಕಡ್ಡಾಯವಾಗಿದೆ.

ಇಷ್ಟು ಅಗತ್ಯವಾದ ಆಧಾರ್ ಕಾರ್ಡ್ ಬದಲಾವಣೆಗೆ ಹೋಗುವುದೇ ದೊಡ್ಡ ತಲೆಬಿಸಿ. ಯಾಕಂದ್ರೆ, ಆಧಾರ್ ಕೇಂದ್ರಕ್ಕೆ ಹೋಗಿ ಕಾಯುವುದಷ್ಟೇ ಅಲ್ಲದೆ ಆಧಾರ್ ಬದಲಾವಣೆಗಾಗಿಯೇ ಹಣ ಪಾವತಿ ಮಾಡಬೇಕಾದ ಪರಿಸ್ಥಿತಿ. ಇಂತಹ ದೊಡ್ಡ ಸಮಸ್ಯೆಯನ್ನು ಬಗೆ ಹರಿಸಲೆಂದೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಆಧಾರ್ ವಿಷಯದಲ್ಲಿ ಹಲವಾರು ಬದಲಾವಣೆಗಳನ್ನ ಮಾಡುತ್ತಿದೆ.

ಹೆಸರು, ಹುಟ್ಟಿದ ದಿನಾಂಕ, ವಿಳಾಸ, ಫೋನ್ ಸಂಖ್ಯೆ ಮುಂತಾದ ಆಧಾರ್ ವಿವರಗಳನ್ನ ನವೀಕರಿಸಲು ಸೇವಾ ಕೇಂದ್ರಗಳು ಮತ್ತು ಇತರ ಆನ್ಲೈನ್ ಸೇವಾ ಕೇಂದ್ರಗಳಿಗೆ ಹೋಗಬೇಕಾಗುತ್ತದೆ. ಈ ವೇಳೆ ಸೇವಾ ಕೇಂದ್ರಗಳು ಗ್ರಾಹಕರಿಂದ ಕೆಲವು ಶುಲ್ಕವನ್ನ ವಿಧಿಸುತ್ತವೆ. ಅಷ್ಟೇ ಅಲ್ಲದೆ, ಈ ಹಿಂದೆ ಸರ್ಕಾರ ಹೊರಡಿಸಿದ ಶುಲ್ಕಗಳಿಗಿಂತ ಹೆಚ್ಚಿನ ಹಣವನ್ನ ವಿಧಿಸುತ್ತಿವೆ. ಈ ಹಿನ್ನೆಲೆಯಲ್ಲಿ ಯುಐಡಿಎಐ ಮಹತ್ವದ ಘೋಷಣೆ ಮಾಡಿದೆ.

ಹೌದು. ಭಾರತದ ಆಧಾರ್ ಸಂಸ್ಥೆಯಾದ ಯುಐಡಿಎಐ, ಆಧಾರ್ ನವೀಕರಣಕ್ಕಾಗಿ ಬಂದ ಬಳಕೆದಾರರಿಂದ ಯಾವುದೇ ಶುಲ್ಕವನ್ನ ಪಾವತಿಸುವ ಅಗತ್ಯವಿಲ್ಲ ಎಂದು ಟ್ವೀಟ್ ಮಾಡಿದೆ. ಆದಾಗ್ಯೂ, ಈ ಉಚಿತ ಸೇವೆಯು ಬಿಎಎಲ್ ಆಧಾರ್ನಲ್ಲಿ ನವೀಕರಿಸಲು ಮಾತ್ರ ಅನ್ವಯಿಸುತ್ತದೆ.

ಅನೇಕ ಜನರು ಮಗುವಿನ ಆಧಾರ್ ಕಾರ್ಡ್’ಗಾಗಿ ಮೋಸದಿಂದ ಹಣ ಕೇಳುತ್ತಿದ್ದಾರೆ ಎಂಬ ದೂರುಗಳನ್ನ ಸ್ವೀಕರಿಸಲಾಗುತ್ತಿದೆ ಎಂದು ಯುಐಡಿಎಐ ಹೇಳಿದೆ. ಯುಐಡಿಎಐ ಈಗ ಬಲವಾದ ಎಚ್ಚರಿಕೆಯನ್ನ ನೀಡಿದೆ. ಇದರ ಭಾಗವಾಗಿ, ಯಾರಾದರೂ ಹಣಕ್ಕೆ ಬೇಡಿಕೆ ಇಟ್ಟರೆ, ಅವರು ತಕ್ಷಣವೇ ದೂರು ದಾಖಲಿಸಬೇಕು. ಯಾರಾದರೂ ಆಧಾರ್ ನವೀಕರಣಕ್ಕಾಗಿ ಹಣವನ್ನ ಕೇಳಿದರೆ, ಅವರು 1947ರಲ್ಲಿ ದೂರು ದಾಖಲಿಸಬಹುದು ಅಥವಾ ಇಮೇಲ್ help@uidai.gov.in. ಇದನ್ನ ಯುಐಡಿಎಐ ಟ್ವಿಟ್ಟರ್’ನಲ್ಲಿ ಪೋಸ್ಟ್ ಮಾಡಿದೆ.