Home Fashion ಕೇವಲ ಐದು ರೂಪಾಯಿಗೆ ಈತ ಮಾರುವ ಆಮ್ಲೆಟ್ ರುಚಿ ಹೇಗಿದೆ ಗೊತ್ತಾ ??|ಕೇವಲ 1 ನಿಮಿಷದಲ್ಲಿ...

ಕೇವಲ ಐದು ರೂಪಾಯಿಗೆ ಈತ ಮಾರುವ ಆಮ್ಲೆಟ್ ರುಚಿ ಹೇಗಿದೆ ಗೊತ್ತಾ ??|ಕೇವಲ 1 ನಿಮಿಷದಲ್ಲಿ ಈತ ತಯಾರಿಸುವ ಆಮ್ಲೆಟ್ ಗೆ ಭಾರಿ ಬೇಡಿಕೆ|ಇಲ್ಲಿದೆ ‘ಭಾರತದ ಆಮ್ಲೆಟ್ ಮನುಷ್ಯ’ನ ಇಂಟೆರೆಸ್ಟಿಂಗ್ ಸ್ಟೋರಿ

Hindu neighbor gifts plot of land

Hindu neighbour gifts land to Muslim journalist

ಆಮ್ಲೆಟ್ ಅಂದ್ರೆ ಯಾರು ತಾನೇ ನೋಡಿಲ್ಲ, ತಿಂದಿಲ್ಲ.. ಹೀಗಿರುವಾಗ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಇದರ ತಯಾರಿ,ಬಳಸುವ ಪದಾರ್ಥ, ಬೆಲೆ ಎಲ್ಲವೂ ತಿಳಿದಿರುತ್ತದೆ. ಇತ್ತೀಚೆಗೆ ಅಂತೂ ಆಹಾರ ಪದಾರ್ಥಗಳ ಬೆಲೆಯೂ ಅಧಿಕವಾಗುತ್ತಲೇ ಇದೆ.ಆದ್ರೆ ಇಲ್ಲೊಬ್ಬ ವ್ಯಕ್ತಿ ಬೆಲೆ ಏರಿಕೆ ನಡುವೆಯೂ ಎಷ್ಟು ಮೊತ್ತಕ್ಕೆ ಆಮ್ಲೆಟ್ ಮಾರಾಟ ಮಾಡುತ್ತಿದ್ದಾನೆ ಗೊತ್ತಾ!?

ಹೌದು. ಈತನನ್ನು ಭಾರತದ ಆಮ್ಲೆಟ್​ ಮನುಷ್ಯ ಎಂದು ಕೂಡ ಕರೆಯುತ್ತಾರೆ. ರುಚಿಕರವಾದ ಆಮ್ಲೆಟ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ಈ ಉದ್ಯಮಿಯೇ ಅರ್ಜುನ್. ಅರ್ಜುನ್ ಭಾರತದ ಅಪ್ಪಟ ರುಚಿಯ ಆಮ್ಲೆಟ್​ನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಈ ಹಣದುಬ್ಬರ ಕಾಲದಲ್ಲೂ ಐದು ರೂಪಾಯಿ ಆಮ್ಲೆಟ್ ಸಿಕ್ಕರೆ ಹೇಗಿರುತ್ತೆ? ಇದು ನಿಮಗೆ ಸ್ವಲ್ಪ ವಿಚಿತ್ರವೆನಿಸಬಹುದು, ಆದರೆ ಇದು ಸಂಪೂರ್ಣವಾಗಿಯೂ ನಿಜ. ಏಕೆಂದರೆ ಕರೇಲ್‌ನಲ್ಲಿ ವಾಸಿಸುವ ಅರ್ಜುನ್ ನಾಯರ್ ಅವರು ವಿಶ್ವದ ಅತ್ಯಂತ ಅಗ್ಗದ ಆಮ್ಲೆಟ್​ನ್ನು ಮಾರಾಟ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ, ಅರ್ಜುನ್ ತಮ್ಮ ಉತ್ಪನ್ನವನ್ನು ತಮ್ಮ ಗ್ರಾಹಕರಿಗೆ ಅತ್ಯಂತ ಸೃಜನಶೀಲ ರೀತಿಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಕ್ವೀನ್ಸ್ ಇನ್‌ಸ್ಟಾ ಎಂಬ ತನ್ನ ಸ್ವಂತ ಬ್ರಾಂಡ್​ನ್ನು ಪ್ರಾರಂಭಿಸಿ ಕೇರಳದ ಕ್ಯಾಲಿಕಟ್‌ನಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದರು.

ಅರ್ಜುನ್ ತನ್ನ ಬೆಲೆಗೆ ಮಾತ್ರವಲ್ಲದೆ ತನ್ನ ಗ್ರಾಹಕರಲ್ಲಿ ವಿವಿಧ ರೀತಿಯ ವೈವಿಧ್ಯತೆಗಳಿಗೆ ಹೆಸರುವಾಸಿಯಾಗಿದ್ದಾರೆ. ಉದಾಹರಣೆಗೆ, ಅವರು ಮಕ್ಕಳಿಗೆ ಮಾಡುವ ಆಮ್ಲೆಟ್‌ಗೆ ಈರುಳ್ಳಿ, ಮೆಣಸಿನಕಾಯಿ ಮತ್ತು ಮೊಟ್ಟೆಯನ್ನು ಬಳಸುವುದಿಲ್ಲವಂತೆ. ಸಾಮಾನ್ಯವಾಗಿ ಜನರಿಗಾಗಿ ಮಾಡುವ ಆಮ್ಲೆಟ್‌ಗಳಲ್ಲಿ ಈರುಳ್ಳಿ, ಮೆಣಸಿನಕಾಯಿ ಮತ್ತು ಅಗತ್ಯ ಪದಾರ್ಥಗಳಿರುತ್ತವೆ.

ನಮಗೆ ಹಸಿವಾದಾಗ ಸಾಮಾನ್ಯವಾಗಿ ಮ್ಯಾಗಿಯನ್ನು 2 ನಿಮಿಷಗಳಲ್ಲಿ ಬೇಯಿಸಲು ಅಥವಾ ತಯಾರಿಸಲು ಇಷ್ಟಪಡುತ್ತೇವೆ. ಆದರೆ ಅರ್ಜುನ್ ನಾಯರ್ ಅವರು ಆಮ್ಲೆಟ್ ತಯಾರಿಸಲು ಕೇವಲ 1 ನಿಮಿಷ ತೆಗೆದುಕೊಳ್ಳುತ್ತಾರೆ. ಅಗತ್ಯಕ್ಕೆ ತಕ್ಕಂತೆ ಬಿಳಿ ಆಮ್ಲೆಟ್ ಮತ್ತು ಹಳದಿ ಆಮ್ಲೆಟ್ ಮಾಡುತ್ತಾರೆ. ಅರ್ಜುನ್ ಅವರ ಆಮ್ಲೆಟ್ ಕೂಡ ವಿಶೇಷವಾಗಿದೆ. ಅದರಲ್ಲಿ ಅವರು ಯಾವುದೇ ರೀತಿಯ ಬಣ್ಣ ಅಥವಾ ಯಾವುದೇ ಸಂರಕ್ಷಕವನ್ನು ಬಳಸುವುದಿಲ್ಲ. ಇಷ್ಟೆಲ್ಲಾ ವೆರೈಟಿ ಇದ್ದರೂ ಅರ್ಜುನ್ ಮಾರುವ ಆಮ್ಲೆಟ್​ ಬೆಲೆ ಕೇವಲ 5 ರೂ.

ಔಟ್‌ಲುಕ್ ಅರ್ಜುನ್ ನಾಯರ್ ಅವರ ಕಥೆಯನ್ನು ಪ್ರಪಂಚದ ಮುಂದೆ ತೆರೆದಿಟ್ಟಾಗ, ಅವರ ಅತ್ಯಂತ ಅಗ್ಗದ ಆಮ್ಲೆಟ್‌ನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಶುರುವಾಗಿದ್ದು,ಅರ್ಜನ್ ತನ್ನ ಕೌಶಲ್ಯದಿಂದ ಛಾಪು ಮೂಡಿಸುತ್ತಿದ್ದಾರೆ.