Home Entertainment ಕಾಡು ಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಕರಡಿಯನ್ನು ಕಾವಲಿಗೆ ನಿಲ್ಲಿಸಿದ ರೈತ!!|ಅಷ್ಟೇ ಅಲ್ಲದೆ ಈ ಸ್ಪೆಷಲ್ ವಾಚ್...

ಕಾಡು ಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಕರಡಿಯನ್ನು ಕಾವಲಿಗೆ ನಿಲ್ಲಿಸಿದ ರೈತ!!|ಅಷ್ಟೇ ಅಲ್ಲದೆ ಈ ಸ್ಪೆಷಲ್ ವಾಚ್ ಮ್ಯಾನ್ ಗೆ ಸಂಬಳ ಬೇರೆ ಇದೆಯಂತೆ| ಈ ವಿಸ್ಮಯಕಾರಿ ವೀಡಿಯೋ ಫುಲ್ ವೈರಲ್

Hindu neighbor gifts plot of land

Hindu neighbour gifts land to Muslim journalist

ಇತ್ತೀಚಿಗೆ ಕಾಡು ಪ್ರಾಣಿಗಳು ನಾಡಿಗಿಳಿದು ರೈತರಿಗೆ ತೊಂದರೆ ಕೊಡುವುದು ಮಾಮೂಲಾಗಿದೆ. ಕಾಡು ಪ್ರಾಣಿಗಳಿಂದ ತಮ್ಮ ಬೆಳೆಗಳನ್ನು ಕಾಪಾಡಿಕೊಳ್ಳುವುದು ರೈತರಿಗೆ ದೊಡ್ಡ ಸವಾಲಾಗಿದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ತೆಲಂಗಾಣದ ರೈತರೊಬ್ಬರು ಅತ್ಯಂತ ಅದ್ಭುತವಾದ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಈ ರೈತನ ಹೊಲದಲ್ಲಿ ಬೆಳೆಯುವ ಬೆಳೆಗೆ ಕರಡಿ ಕಾವಲು ಕಾಯುತ್ತದೆ.

ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ರೈತ ಮಂಗಗಳು ಮತ್ತು ಕಾಡುಹಂದಿಗಳ ಕಾಟದಿಂದ ಬೇಸತ್ತು ಹೋಗಿದ್ದಾರೆ. ದಿನವಿಡೀ ಹೊಲದಲ್ಲಿ ಕುಳಿತು ಬೆಳೆಗಳಿಗೆ ಕಾವಲು ನೀಡುವುದು ಸಾಧ್ಯವಾಗದ ಮಾತು. ಈ ಹಿನ್ನೆಲೆಯಲ್ಲಿ ಅವರು ವಿಶೇಷ ಮಾರ್ಗವನ್ನು ಕಂಡುಕೊಂಡಿದ್ದಾರೆ.

https://youtu.be/-o2WDpk-Lz8

ಭಾಸ್ಕರ್ ರೆಡ್ಡಿ ಅವರು ತಮ್ಮ ಬೆಳೆಗಳನ್ನು ಕಾಯಲು ಕರಡಿಯನ್ನು ಬಾಡಿಗೆಗೆ ಪಡೆದಿದ್ದಾರೆ. ಅಷ್ಟೇ ಅಲ್ಲ ಈ ‘ಕರಡಿ’ಗೆ ದಿನಗೂಲಿ 500 ರೂ. ಎಂದು ನಿಗದಿ ಮಾಡಿದ್ದಾರೆ. ಈಗ ಮಂಗಗಳು ಮತ್ತು ಕಾಡುಹಂದಿಗಳು ಅವನ ಹೊಲದ ಸುತ್ತಲೂ ಸುಳಿಯುವುದಿಲ್ಲ. ಈ ಕರಡಿ ದಿನವಿಡೀ ರೈತನ ಹೊಲಗಳಲ್ಲಿ ಸುತ್ತಾಡುತ್ತಾ ಅವನ ಬೆಳೆಗಳನ್ನು ಕಾಪಾಡುತ್ತದೆ. ಕರಡಿಯನ್ನು ದೂರದಿಂದ ನೋಡಿದ ಮಂಗ ಮತ್ತು ಕಾಡುಹಂದಿ ಅಲ್ಲಿಂದ ಓಡಿಹೋಗುತ್ತವೆ.

ವರದಿಯ ಪ್ರಕಾರ, ರೈತ ಭಾಸ್ಕರ್ ರೆಡ್ಡಿ, ತನ್ನ ಹೊಲವನ್ನು ಕಾವಲು ಕಾಯಲು ವ್ಯಕ್ತಿಯೊಬ್ಬರನ್ನು ನೇಮಿಸಿದ್ದಾರೆ. ಆ ವ್ಯಕ್ತಿ ಕರಡಿ ವೇಷವನ್ನು ಧರಿಸಿ ಹೊಲದ ಬೆಳೆಗೆ ಕಾವಲಾಗುತ್ತಾರೆ. ಭಾಸ್ಕರ್ ಅವರ ಈ ಕಲ್ಪನೆಯು ಪರಿಣಾಮಕಾರಿ ಎಂದು ಸಾಬೀತಾಗಿದೆ. ಈ ತಂತ್ರವನ್ನು ಅಳವಡಿಸಿಕೊಂಡ ನಂತರ ಮಂಗಗಳು ಮತ್ತು ಕಾಡುಹಂದಿಗಳಿಂದ ಬೆಳೆಗಳನ್ನು ರಕ್ಷಿಸುವುದು ಸುಲಭವಾಗಿದೆ ಎನ್ನಲಾಗಿದೆ. ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಇದರ ವೀಡಿಯೋವನ್ನು ಅಪ್‌ಲೋಡ್ ಮಾಡಿಲಾಗಿದ್ದು, ಅದೀಗ ಎಲ್ಲೆಡೆ ವೈರಲ್ ಆಗಿದೆ.