ಬೈಕ್ ನಲ್ಲಿ ಹೋಗುತ್ತಿದ್ದಾಗ ಬಡಿದ ಗಾಳಿಪಟ | ಸವಾರನ ಕುತ್ತಿಗೆಯನ್ನೇ ಇರಿಯಿತು ದಾರ !!

ಬೈಕಿನಲ್ಲಿ ಸಾಗುತ್ತಿದ್ದ ವೇಳೆ ಗಾಳಿಪಟದ ದಾರ ಬಡಿದ ಪರಿಣಾಮ ಬೈಕ್​ ಸವಾರನ ಕುತ್ತಿಗೆ ಹಾಗೂ ಕೈ ಬೆರಳುಗಳಿಗೆ ಗಂಭೀರವಾದ ಗಾಯವಾದ ಘಟನೆ ಪುಣೆಯ ದಪೋಡಿ ಎಂಬಲ್ಲಿ ನಡೆದಿದೆ.

ಗಾಯಾಳುವನ್ನು 32 ವರ್ಷದ ಆಶಿಷ್​ ಸುರೇಶ್​ ಪವಾರ್​ ಎಂದು ಗುರುತಿಸಲಾಗಿದ್ದು,ಈ ಸಂಬಂಧ ಭೋಸಾರಿ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

ಗಾಳಿಪಟವನ್ನು ಯಾರು ಹಾರಿಸಿದ್ದರು ಎಂಬುದರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಆದರೆ ಸದ್ಯ ಬೈಕ್ ಸವಾರ ಆಶಿಷ್​ ಐಪಿಸಿ ಸೆಕ್ಷನ್​ 337ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗಾಳಿಪಟದ ದಾರಕ್ಕೆ ಗಾಜು ಲೇಪಿತವಾಗಿದ್ದರಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಆಶಿಷ್​ ಕುಮಾರ್​​ ಪುಣೆ – ಮುಂಬೈ ಹೆದ್ದಾರಿಯಲ್ಲಿರುವ ಬೊಪಾಡಿಯಲ್ಲಿ ಬೈಕ್​ನಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಅವರ ಕುತ್ತಿಗೆಗೆ ದಾರ ಬಡಿದಿದೆ ಎನ್ನಲಾಗಿದೆ.

Leave A Reply

Your email address will not be published.