ರಸ್ತೆಗೆ ಅಡ್ಡವಾಗಿ ಬಂದ ಕಾಡು ಹಂದಿಗೆ ಸ್ಕೂಟರ್ ಡಿಕ್ಕಿ | ಸ್ಕೂಟರ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು, ಗಂಭೀರ ಗಾಯಗೊಂಡ ಕಾಡುಹಂದಿ ಸ್ಥಳದಲ್ಲೇ ಸಾವು

Share the Article

ರಸ್ತೆಗಡ್ಡವಾಗಿ ಬಂದ ಕಾಡಹಂದಿಗೆ ಸ್ಕೂಟರ್ ಬಡಿದ ಪರಿಣಾಮ ಸ್ಕೂಟರ್ ಪಲ್ಟಿಯಾಗಿ ಸವಾರ ಮೃತಪಟ್ಟ ದಾರುಣ ಘಟನೆ ಕಾಸರಗೋಡಿನ ಮುಳ್ಳೇರಿಯ ಸಮೀಪದ ಕರ್ಮಂತೋಯಲ್ಲಿ ನಡೆದಿದೆ.

ಕರ್ಮಂತೋಡಿ ಕಾವುಂಗಾಲ್ ನ ಕುಞಬು ನಾಯರ್ (60) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಮುಳ್ಳೇರಿಯ ಪೇಟೆಗೆ ತೆರಳಿ ಮನೆಗೆ ಮರಳುತ್ತಿದ್ದಾಗ ಕರ್ಮಂತೋಡಿಯಲ್ಲಿ ಕಾಡುಹಂದಿಯು ದಾರಿಗಡ್ಡವಾಗಿ ಓಡಿದ್ದು, ಸ್ಕೂಟರ್ ಹಂದಿಗೆ ಬಡಿದಿದೆ.

ಆ ವೇಳೆ ನಿಯಂತ್ರಣ ತಪ್ಪಿದ ಸ್ಕೂಟರ್ ಮಗುಚಿ ಬಿದ್ದಿದ್ದು, ರಸ್ತೆಗೆನಸೆಯಲ್ಪಟ್ಟ ಕುಞಬು ನಾಯರ್, ಗಂಭೀರ ಗಾಯಗೊಂಡಿದ್ದು, ಕೂಡಲೇ ಸ್ಥಳೀಯರು ಮುಳ್ಳೇರಿಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. ಸ್ಕೂಟರ್ ಡಿಕ್ಕಿಯ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಕಾಡು ಹಂದಿ ಕೂಡಾ ಸ್ಥಳದಲ್ಲೇ ಮೃತಪಟ್ಟಿದೆ.

ಘಟನಾ ಸ್ಥಳಕ್ಕೆ ಅರಣ್ಯ ಪಾಲಕರು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಆದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಲಾಗಿದೆ.

Leave A Reply