ಬೆಂಗಳೂರಿನ ಯುವತಿ ಒಬ್ಬಳಿಗೆ ಆಟೋ ಡ್ರೈವರ್ ಒಬ್ಬ ಪ್ರೀತಿಯ ಬಲೆ ಬೀಸಿ, ವಂಚಿಸಿ ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಎಂದು ಹೇಳಿ ಯುವತಿಗೆ ವಿಷ ಉಣಿಸಿ ಎಸ್ಕೇಪ್ ಆಗಿರುವ ಘಟನೆ ನಡೆದಿದೆ.


ಮಾಗಡಿ ಮೂಲದ 22 ವರ್ಷದ ಭವಾನಿ ಮೃತ ದುರ್ದೈವಿ. ಕಳೆದ ಎರಡು ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ ಈಕೆ, ಮೊಬೈಲ್ ಅಂಗಡಿಯೊಂದರಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಾ ಬಾಡಿಗೆ ಮನೆಯಲ್ಲಿ ಒಬ್ಬಳೇ ವಾಸವಿದ್ದಳು. ಇತ್ತೀಚೆಗೆ ಮನೆಯವರು ಆಕೆಗೆ ಮದುವೆ ನಿಶ್ಚಯ ಮಾಡಿ ಅವಳನ್ನು ಊರಿಗೆ ಕರೆಸಿಕೊಂಡಿದ್ದರು. ಆದರೆ ಊರಿನಿಂದ ಮರಳಿದ ಎರಡೇ ದಿನಕ್ಕೆ ಆಕೆ ಹೆಣವಾಗಿ ಪತ್ತೆಯಾಗಿದ್ದಾಳೆ
ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರಿಗೆ ಹಲವು ವಿಚಾರಗಳು ತಿಳಿದುಬಂದಿದ್ದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಭವಾನಿಗೆ ಆಟೋ ಚಾಲಕನೊಬ್ಬನ ಜೊತೆ ಪ್ರೇಮ ಸಂಬಂಧವಿತ್ತು, ಆತ ಆಗಾಗ ಮನೆಗೆ ಬಂದು ಹೋಗುತ್ತಿದ್ದ ಎಂಬುದು ತಿಳಿದು ಬಂದಿದೆ. ಅಲ್ಲದೆ ಆಟೋ ಚಾಲಕ ಕೂಡ ತಾನೇ ಆಕೆಯನ್ನು ಮದುವೆಯಾಗುವುದಾಗಿದ್ದ. ಆದರೆ ಕೆಲವು ದಿನಗಳ ನಂತರ ಆತನಿಗೆ ಈಗಾಗಲೇ ಮದುವೆಯಾಗಿ ಒಂದು ಗಂಡು ಮಗನೂ ಇದ್ದಾನೆ ಎಂಬ ಕಹಿ ಸತ್ಯ ಭವಾನಿಗೆ ಗೊತ್ತಾಗಿದೆ. ಇದರಿಂದ ಕೋಪಗೊಂಡು ಆಕೆ ಮನೆಯವರು ತೋರಿಸಿದ ಹುಡುಗನನ್ನು ಮದುವೆಯಾಗಲು ಮುಂದಾಗಿದ್ದಾಳೆ. ಆದರೆ ಆಟೋ ಡ್ರೈವರ್ ಅನ್ನು ಬಿಟ್ಟಿರಲು ಆಕೆಗೆ ಆಗದೆ ಮಾನಸಿಕ ಸಂಕಟಕ್ಕೆ ಸೀಲುಕಿದ್ದಾಳೆ.
ಇದನ್ನು ಆಟೋ ಡ್ರೈವರ್ ಬರಲಿ ಹೇಳಿಕೊಂಡಾಗ ಆತ ಕ್ರಿಮಿನಲ್ ಐಡಿಯಾ ಉಪಯೋಗಿಸಿ ಇದನ್ನೇ ಬಂಡವಾಳ ಮಾಡಿಕೊಂಡು ನಾವಿಬ್ಬರು ಒಟ್ಟಿಗೆ ಸಾಯೋಣ. ಹಾಗಾದ್ರೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿ ಯುವತಿಯನ್ನು ಒಪ್ಪಿಸಿದ್ದಾನೆ. ನಂತರ ಭವಾನಿ ಸಂಪೂರ್ಣವಾಗಿ ವಿಷ ಸೇವಿಸುತ್ತಿದ್ದಂತೆ, ಈತ ಮಾತ್ರ ತಾನು ಸ್ವಲ್ಪ ವಿಷ ಕುಡಿದಂತೆ ನಟಿಸಿ ಉಳಿದ ವಿಷವನ್ನು ತನ್ನ ಬಾಯಿ ಹಾಗೂ ಮುಖದ ಮೇಲೆ ಚೆಲ್ಲಿಕೊಂಡಿದ್ದಾನೆ. ವಿಷ ಸೇವಿಸಿ ಒದ್ದಾಡುತ್ತಿದ್ದ ಯುವತಿಯ ಕತ್ತನ್ನು ಆತ ಹಿಸುಕಿದ್ದಾನೆ ಎಂಬ ಗಂಭೀರ ಶಂಕೆ ವ್ಯಕ್ತವಾಗಿದ್ದು, ಪರಿಣಾಮವಾಗಿ ಭವಾನಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.
ವಿಷ ಕುಡಿದಂತೆ ನಾಟಕವಾಡಿ ಬಾಯಿಗೆ ಸವರಿಕೊಂಡಿದ್ದ ಆಟೋ ಚಾಲಕ ಮಾತ್ರ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಬಗ್ಗೆ ಪೊಲೀಸರು ಪ್ರಕರಣದ ಕಲಿಸಿಕೊಂಡು ಕ್ರಮಕ್ಕೆ ಮುಂದಾಗಿದ್ದಾರೆ.

